Advertisement

ಸಶಕ್ತ ದೇಶದ ಪರಿಕಲ್ಪನೆಗೆ ಪೂರಕ ಬಜೆಟ್: ಸಿ.ಟಿ ರವಿ

06:14 PM Feb 01, 2021 | Team Udayavani |

ಬೆಂಗಳೂರು: ಸ್ವಾವಲಂಬಿ-ಸಶಕ್ತ ಭಾರತದ ಪರಿಕಲ್ಪನೆಯೊಂದಿಗೆ 2021-22ರ ಕೇಂದ್ರ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ. ರವಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.

Advertisement

ಕೋವಿಡ್-19 ವಿರುದ್ಧ ಸ್ವದೇಶಿ ಲಸಿಕೆ ಉತ್ಪಾದನೆಗೆ ಹೆಚ್ಚು ಹಣ ನೀಡಿದ್ದು, ಇದರಿಂದಾಗಿ ಜನರಲ್ಲಿದ್ದ ಆತಂಕ ನಿವಾರಣೆಯಾಗಿ, ಧೈರ್ಯ ಹೆಚ್ಚಳವಾಗಲಿದೆ. ಇದು ಉತ್ಪಾದಕತಾ ವೃದ್ಧಿಗೆ ಪೂರಕ ಎಂದಿರುವ ಅವರು, ಮೂಲಸೌಕರ್ಯ ವೃದ್ಧಿ, ಆರೋಗ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಹಣ ಹೂಡಿಕೆ, ಮೆಟ್ರೊ, ರೈಲ್ವೆ, ಬಂದರು ಅಭಿವೃದ್ಧಿಯ ಕ್ರಮದಿಂದ ದೇಶವು ಪ್ರಗತಿಪಥದಲ್ಲಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:  ಮಂಗಳೂರಿನ ಹೋಟೆಲ್ ನಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ: ಪ್ರೇಮ ವೈಫಲ್ಯವೇ ಕಾರಣ, ಮೂವರ ಬಂಧನ

ದೇಶದ ಭವಿಷ್ಯದ ಚಿಂತನೆಯನ್ನು ಮನಸ್ಸಿನಲ್ಲಿಟ್ಟು ಯೋಜನೆಗಳನ್ನು ರೂಪಿಸಿದ್ದು, ರೈತರ ಆದಾಯ ದ್ವಿಗುಣಗೊಳಿಸಲು ಪೂರಕ ಚಿಂತನೆಗಳೂ ಬಜೆಟ್‍ ನಲ್ಲಿವೆ. ಇದಕ್ಕಾಗಿ ಜನಪರ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಜನರ ಪರವಾಗಿ ಅಭಿನಂದಿಸುವುದಾಗಿ ಸಿ.ಟಿ.ರವಿ ಹೇಳಿದ್ದಾರೆ.

ಇದನ್ನೂ ಓದಿ:  ದೇಶದ ಅಭಿವೃದ್ಧಿಗೆ ಪೂರಕ ಬಜೆಟ್: ನಳಿನ್‍ ಕುಮಾರ್ ಕಟೀಲ್

Advertisement
Advertisement

Udayavani is now on Telegram. Click here to join our channel and stay updated with the latest news.

Next