Advertisement

ಇನ್ನೂ ಏರಲಿದೆ ಸೂರ್ಯನ ತಾಪ

05:59 AM Mar 21, 2019 | |

ದಾವಣಗೆರೆ: ಅಬ್ಟಾ ಇದೇನಪ್ಪಾ ಇಂತಹ ಬಿಸಿಲು…! ಎಂದು ಪರಿತಪಿಸುವ ವಾತವಾರಣ ಈಗಷ್ಟೇ ಆರಂಭವಾಗಿದೆ. ಇನ್ನೂ ಒಂದು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಅಲ್ಲದೆ, ಸೂರ್ಯನ ಪ್ರಖರತೆ ಕಳೆದ ವರ್ಷಕ್ಕಿಂತ ಅಧಿಕವಾಗಲಿದೆ!.

Advertisement

2018ಕ್ಕೆ ಹೋಲಿಸಿದರೆ ಈ ಬಾರಿ ಬೇಸಿಗೆಯಲ್ಲಿ ಸೂರ್ಯನ ತಾಪ ಇನ್ನಷ್ಟು ಏರುವುದು ಖಚಿತ ಎಂಬುದಾಗಿ ಹವಾಮಾನ ಅಂದಾಜು ಮಾಡುವ ವಿವಿಧ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಅಂದಾಜಿನ ಪ್ರಕಾರ ಮಾರ್ಚ್‌-ಏಪ್ರಿಲ್‌ ತಿಂಗಳಲ್ಲಿ ಜಿಲ್ಲೆಯ ಗರಿಷ್ಠ ಉಷ್ಣಾಂಶ ಸರಾಸರಿ 36 ರಿಂದ 39 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿ ಇರಲಿದೆ. ಕನಿಷ್ಠ ಉಷ್ಣಾಂಶ 18ರಿಂದ 24 ಡಿಗ್ರಿ ಸೆಲ್ಸಿಯಸ್‌ನವರೆಗೆ
ಇರಲಿದೆ. 

ಮಾರ್ಚ್‌ ಆರಂಭದಲ್ಲಿ 36 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ಉಷ್ಣಾಂಶ ಮಾ. 18ರ ನಂತರ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ಇದೇ ಉಷ್ಣಾಂಶ 23ರ ವರೆಗೂ  ಮುಂದುವರಿಯಲಿದೆ. ಮಾ.23ರ ನಂತರ ಸೂರ್ಯ ತನ್ನ ಪ್ರಖರತೆಯನ್ನು ಮತ್ತಷ್ಟು ಹೆಚ್ಚಿಸಲಿದ್ದಾನೆ. 26ರ ನಂತರ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇದೆ. ಮಾ. 29ರಂದು 39 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಏರಲಿದೆ. ಮಾರ್ಚ್‌ ಕೊನೆಯಲ್ಲಿ ಸೂರ್ಯ ತನ್ನ ಪ್ರತಾಪ ಪ್ರದರ್ಶಿಸಲಿದ್ದಾನೆ.
 
ಮಾರ್ಚ್‌ 28ರ ನಂತರ ಮೋಡ ಕವಿದ ವಾತಾವರಣವಿದ್ದರೂ ಬಿಸಿಲು ಮಾತ್ರ ಎಂದಿನಂತೆ ಇರಲಿದೆ. ಏಪ್ರಿಲ್‌ನಲ್ಲೂ
ಬಿಸಿಲಿನ ತಾಪ ಮತ್ತಷ್ಟು ಏರಲಿದೆ. ಸದ್ಯ 35 ಡಿಗ್ರಿ ಸೆಲ್ಸಿಯಸ್‌ನಿಂದ 37ರ ವರೆಗೆ ತಾಪಮಾನ ಇದೆ. ತಾಪಮಾನದಲ್ಲಿ ಇಳಿಕೆಗಿಂತ ಏರಿಕೆಯೇ ಕಾಣುತ್ತಿದೆ. ಕಳೆದ ವರ್ಷ ಇದೇ ವೇಳೆ ತಾಪಮಾನ 35-36 ಡಿಗ್ರಿ ಸೆಲ್ಸಿಯಸ್‌ನಷ್ಟು ಇತ್ತು. ಈ ಬಾರಿ ಸರಾಸರಿ 2 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ನಾಗಕರಿಕರು ಹೆಚ್ಚು ತಾಪಮಾನ ಅನುಭವಿಸಬೇಕಿದೆ. 

ತಾಪಮಾನ ಹೆಚ್ಚಳಕ್ಕೆ ಕೇವಲ ಸೂರ್ಯ ಮಾತ್ರ ಕಾರಣನಲ್ಲ. ನಗರ ಪ್ರದೇಶದಲ್ಲಿನ ಮರಗಳ ಕಡಿತ, ವಾಹನಗಳ ಹೆಚ್ಚಳ ಸಹ ಕಾರಣವಾಗಿದೆ. ಸೂರ್ಯನ ಕಿರಣಗಳು ಮರ, ಗಿಡಗಳ ಮೇಲೆ ಬೀಳುತ್ತಿದ್ದುದರಿಂದ ತಾಪಮಾನ ಹೆಚ್ಚಾಗುತ್ತಿರಲಿಲ್ಲ. ಆದರೆ, ಮರಗಳ ನಾಶ ಮತ್ತು ಕಟ್ಟಡಗಳ ಹೆಚ್ಚಳದಿಂದಾಗಿ ತಾಪಮಾನ ಸೂರ್ಯನ ಶಾಖಕ್ಕಿಂತ ಹೆಚ್ಚಾಗುತ್ತದೆ. 

ಬಿಸಿಯಿಂದಾಗಿ ಜನರು ಇಂದು ಹೊರಬೀಳಲು ಹಿಂದೇಟು ಹಾಕುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯ ವೇಳೆಗಾಗಲೇ ಬಿಸಿಲು ಮೈ ಸುಡುವಷ್ಟು ಮಟ್ಟಿಗಿದೆ. ಸೂರ್ಯ ನೆತ್ತಿಯ ಮೇಲೆ ಬರುವ ವೇಳೆಗಂತೂ ಬೀದಿಗಳಲ್ಲಿ ಜನರ ಓಡಾಟವೇ ಕಡಿಮೆಯಾಗುತ್ತಿದೆ. ಬಿಸಿಲ ಬೇಗೆ ತಣಿಸಿಕೊಳ್ಳಲು ಮಂದಿ ಹಣ್ಣಿನ ರಸ ಸೇರಿದಂತೆ ಇತರೆ ತಂಪು ಪಾನೀಯಗಳ ಮೊರೆಹೋಗುತ್ತಿದ್ದಾರೆ. 

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next