Advertisement

ರಕ್ಷಣೆ ಮುಖ್ಯ, ಹೊಸ ವರ್ಷಾಚರಣೆಗಾಗಿ ಬೆಂಗಳೂರಿಗೆ ಬರಲ್ಲ; ಸನ್ನಿ

01:28 PM Dec 20, 2017 | Sharanya Alva |

ಬೆಂಗಳೂರು: ಹೊಸ ವರ್ಷಾಚರಣೆ ಕಾರ್ಯಕ್ರಮಕ್ಕಾಗಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರನ್ನು ಬೆಂಗಳೂರಿಗೆ ಆಹ್ವಾನಿಸಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ, ವಿವಾದ ಹುಟ್ಟಿಕೊಂಡ ಬೆನ್ನಲ್ಲೇ, ತನಗೆ ಹಾಗೂ ತನ್ನ ಸಂಗಡಿಗರಿಗೆ ರಕ್ಷಣೆಯನ್ನು ಕೊಡುವ ಬಗ್ಗೆ ಪೊಲೀಸರು ಭರವಸೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನನಗೆ ಸಂಭ್ರಮಕ್ಕಿಂತ ಭದ್ರತೆ ಮುಖ್ಯ, ಇದರಿಂದಾಗಿ ಬೆಂಗಳೂರಿಗೆ ಬರಲ್ಲ ಎಂದು ಸನ್ನಿ ಲಿಯೋನ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸನ್ನಿ ಲಿಯೋನ್ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ ಬಳಿಕ ಕಾರ್ಯಕ್ರಮದ ಸಂಘಟಕರು ಅನುಮತಿಗಾಗಿ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸುತ್ತಿರುವ ನಡುವೆ ಮಂಗಳವಾರ ಸಂಜೆ ಸನ್ನಿ ಲಿಯೋನ್ ಟ್ವೀಟ್ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಬೆಂಗಳೂರು ಪೊಲೀಸರು ಈಗಾಗಲೇ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದು,  ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನನಗಾಗಲಿ, ನನ್ನ ತಂಡಕ್ಕಾಗಲಿ ರಕ್ಷಣೆ ಕೊಡಲು ನಮಗೆ ಕಷ್ಟ ಎಂದಿದ್ದಾರೆ. ನನ್ನ ಆಲೋಚನೆ ಪ್ರಕಾರ ಜನರ ಹಾಗೂ ನನ್ನ ರಕ್ಷಣೆ ಮುಖ್ಯ. ಈ ಹಿನ್ನೆಲೆಯಲ್ಲಿ ನಾನು ಬೆಂಗಳೂರು ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ದೇವರು ಒಳ್ಳೇದು ಮಾಡಲಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು…ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next