Advertisement

ಸುಂಕದಕಟ್ಟೆ ಪಾಲಿಟೆಕ್ನಿಕ್‌ ಕಾಲೇಜಿನಿಂದ ಕಳವು: ಓರ್ವನ ಬಂಧನ

08:17 PM Jan 21, 2021 | Team Udayavani |

ಬಜಪೆ: ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ 2020ರ ಡಿ.9ರಂದು ಕಚೇರಿಯ ಬೀಗ ಮುರಿದು ಕಪಾಟಿನಲ್ಲಿದ್ದ 5.41ಲ. ರೂ. ಕಳವು ಮಾಡಿದ್ದ ಆರೋಪದಲ್ಲಿ ವಾಮಂಜೂರು ತಿರುವೈಲು ಗ್ರಾಮದ ಈಸ್ಲಾ ಉಲ್‌ ಜುಮ್ಮಾ ಮಸೀದಿ ಕಾಂಪೌಂಡಿನ ನಿವಾಸಿ ಆರೀಫ್‌ (26)ನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

Advertisement

ಈತನ ಮೇಲೆ ಕಳವು, ಸುಲಿಗೆ, ದರೋಡೆ, ಕೊಲೆಗೆ ಯತ್ನ ಮತ್ತು ಎ.ಟಿ.ಎಂ. ಕಳವಿಗೆ ಸಂಬಂಧಿಸಿ ಮೂಡಬಿದಿರೆ ಪೊಲೀಸ್‌ ಠಾಣೆಯಲ್ಲಿ 7 ಪ್ರಕರಣ, ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 4, ಕಾವೂರು ಮತ್ತು ಕಂಕನಾಡಿ ನಗರ ಪೊಲೀಸ್‌ ಠಾಣೆಯಲ್ಲಿ ತಲಾ 2, ಬಂಟ್ವಾಳ ನಗರ , ಗ್ರಾಮಾಂತರ ಹಾಗೂ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ತಲಾ ಒಂದು ಸಹಿತ ಸುಮಾರು 18 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ:ಮನಕಲಕುವ ಘಟನೆ: ಕಬಡ್ಡಿ … ಕಬಡ್ಡಿ… ಎನ್ನುತ್ತಲೇ ಪ್ರಾಣಬಿಟ್ಟ ಯುವಕ !

ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ಬಜಪೆ ಪೊಲೀಸ್‌ ನಿರೀಕ್ಷಕ ಕೆ. ಆರ್‌. ನಾಯ್ಕ ನೇತೃತ್ವದಲ್ಲಿ ಪಿಎಸ್‌ಐ ಪೂವಪ್ಪ ಎಚ್‌.ಎಂ., ರಾಘವೇಂದ್ರ ನಾಯ್ಕ, ಎಎಸ್‌ಐ ರಾಮ ಪೂಜಾರಿ, ಲಕ್ಷ್ಮಣ ಗೌಡ, ಸಿಬಂದಿ ವರ್ಗದ ಸುಧೀರ್‌ ಶೆಟ್ಟಿ , ಸಂತೋಷ್‌ ಡಿ.ಕೆ., ರಶೀದ್‌ ಶೇಖ್‌, ಲಕ್ಷ್ಮಣ್‌, ವಕೀಲ್‌ ಲಮಾಣಿ ಮತ್ತು ವಿನೋದ್‌ ಕುಮಾರ್‌ ಅವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next