Advertisement

ಬಾಗಲಕೋಟೆ ಕಾಂಗ್ರೆಸ್ ನಾಯಕರೊಂದಿಗೆ ಮತ್ತೊಮ್ಮೆ ಸುನಿಲಗೌಡ ನಾಮಪತ್ರ

01:25 PM Nov 23, 2021 | Team Udayavani |

ವಿಜಯಪುರ : ಸ್ಥಳೀಯ ಸಂಸ್ಥೆಗಳ ಮೇಲ್ಮನೆಯ ವಿಜಯಪುರ ಮೇಲ್ಮನೆಯ ದ್ವಿಸದಸ್ಯತ್ವದ ಕ್ಷೇತ್ರದ ಕಾಂಗ್ರೆಸ್ ಏಕೈಕ ಅಭ್ಯರ್ಥಿ ಸುನಿಲಗೌಡ ಪಾಟೀಲ ಬಾಗಲಕೋಟೆ ಕಾಂಗ್ರೆಸ್ ನಾಯಕರೊಂದಿಗೂ ಆಗಮಿಸಿ ಮತ್ತೊಂದು ಸುತ್ತಿನ ನಾಮಪತ್ರ ಸಲ್ಲಿಸಿದರು.

Advertisement

ಮಂಗಳವಾರ ಬೆಳಿಗ್ಗೆ ವಿಜಯಪುರ ಜಿಲ್ಲೆಯ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ಒಂದು ನಾಮಪತ್ರ ಸಲ್ಲಿಸಿದ್ದರು.

ಕೆಲ ಸಮಯದ ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮೇಲ್ಮನೆ ಶಾಸಕ ಆರ್.ಬಿ.ತಿಮ್ಮಾಪುರ,  ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಮಾಜಿ ಸಚಿವರಾದ ಅಜಯಕುಮಾರ ಸರನಾಯಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮುದ್ದೇಬಿಹಾಳದ ಸಿ.ಎಸ್. ನಾಡಗೌಡ ಇವರೊಂದಿಗೆ ಮತ್ತೊಮ್ಮೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ಚುನಾವಣೆ ಅಧಿಕಾರಿ ಸುನಿಲಕುಮಾರ ಅವರಿಗೆ ನಾಮಪತ್ರ ಸಲ್ಲಿಸಿದರು.

ವಿಜಯಪುರ ಕಾಂಗ್ರೆಸ್ ನಾಯಕರ ತಂಡದೊಂದಿಗೂ ಟಿಕೇಟ್ ವಂಚಿತ ಎಸ್.ಆರ್. ಪಾಟೀಲ ಕಾಣಿಸಿಕೊಳ್ಳದೇ ಅತೃಪ್ತಿ ಇದೆ ಎಂಬ ಚರ್ಚೆಗೆ ಪುಷ್ಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next