Advertisement

ದತ್ತಾತ್ರೇಯ ಗೋತ್ರದ ರಾಹುಲ್‌ ಗಾಂಧಿಗೆ ದತ್ತ ಜಯಂತಿಗೆ ಆಹ್ವಾನ !

05:35 PM Nov 29, 2018 | Team Udayavani |

ಬೆಂಗಳೂರು: ದತ್ತಾತ್ರೇಯ ಗೋತ್ರ ಎಂದು ಹೇಳಿಕೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಚಿಕ್ಕಮಗಳೂರಿನಲ್ಲಿ ನಡೆಯಲಿರುವ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ ಅವರು ಟಾಂಗ್‌ ನೀಡಿದ್ದಾರೆ. 

Advertisement

ಸಾಮಾಜಿಕ ತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಿರುವ  ಪ್ರಖರ ಹಿಂದುತ್ವವಾದಿ ಸುನೀಲ್‌ ಕುಮಾರ್‌ ಅವರು, ದತ್ತಾತ್ರೇಯ ಗೋತ್ರದ ರಾಹುಲ್‌ ಗಾಂಧಿಯವರಿಗೆ  ಡಿಸೆಂಬರ್‌22 ರಂದು ಚಿಕ್ಕಮಗಳೂರಿನಲ್ಲಿ  ದತ್ತ ಜಯಂತಿಗೆ ಆಹ್ವಾನ ಎಂದು ಟ್ವೀಟ್‌ ಮಾಡಿ ರಾಹುಲ್‌ ಗಾಂಧಿ ಅವರನ್ನು ಟ್ಯಾಗ್‌ ಮಾಡಿದ್ದಾರೆ. 

ವಿಡಿಯೋವೊಂದರಲ್ಲಿ  ನಿಮ್ಮ ಗೋತ್ರವನ್ನು  40 ವರ್ಷದ ನಂತರ ಪ್ರಕಟ ಮಾಡಿದ್ದೀರಿ. ದತ್ತ ಜಯಂತಿ ಯಲ್ಲಿ ಮಾಲಾಧಾರಿಯಾಗಿ ಬಂದು ನಮ್ಮೊಂದಿಗೆ ಪಾಲ್ಗೊಳ್ಳಿ. ಅಲ್ಲಿರುವ ಅನೇಕ ಸಮಸ್ಯೆಗಳಿಗೆ ಸಾಕ್ಷಿಯಾಗಿ ಅವುಗಳನ್ನು ಪರಿಹರಿಸುವ . ದತ್ತ ಜಯಂತಿಗೆ ಸ್ವಾಗತವನ್ನು ಬಯಸುತ್ತೇನೆ ಎಂದಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next