Advertisement

ಸಿಕ್ಖ್ ಅಲ್ಲವೆಂದು ಸಿಎಂ ಮಾಡಲಿಲ್ಲ: ಸುನೀಲ್‌ ಜಾಖಡ್‌

12:21 AM Feb 03, 2022 | Team Udayavani |

ಪಂಜಾಬ್‌ನಲ್ಲಿ ಚರಣ್‌ಜಿತ್‌ ಸಿಂಗ್‌ ಚ‌ನ್ನಿಯನ್ನು ಕಾಂಗ್ರೆಸ್‌ ನೂತನ ಮುಖ್ಯಮಂತ್ರಿಯನ್ನಾಗಿ ನೇಮಿಸಿದ್ದು ಈಗ ಹಳೆಯ ಸುದ್ದಿ.

Advertisement

ಆದರೆ ಅಲ್ಲಿ ಒಳಜಗಳ ಮಾತ್ರ ಮುಗಿದೇ ಇಲ್ಲ. ಅದಕ್ಕೆ ಹೊಸತೊಂದು ಸಾಕ್ಷಿಯೆಂಬಂತೆ, ಪಂಜಾಬ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸುನೀಲ್‌ ಜಾಖಡ್‌ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

“ಕಳೆದ ವರ್ಷ, ಅಮರೀಂದರ್‌ ಸಿಂಗ್‌ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದ ಅನಂತರ ನಾನೇ ಮುಖ್ಯಮಂತ್ರಿಯಾಗಬೇಕೆಂದು ಕಾಂಗ್ರೆಸ್‌ನ 42 ಶಾಸಕರು ಬಯಸಿದ್ದರು. ಈ ಮಟ್ಟದ ಬೆಂಬಲ ಬೇರಾರಿಗೂ ಸಿಕ್ಕಿರಲಿಲ್ಲ. ಆದರೆ ನಾನು ಸಿಕ್ಖ್ ಅಲ್ಲವೆಂದು ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ಇದು ಒಳಗಿನಿಂದ ನನ್ನನ್ನು ಕಾಡುತ್ತಿದೆ” ಎಂದಿದ್ದಾರೆ ಜಾಖಡ್‌.

ಇದು ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಮತ್ತೊಂದು ಮುಜುಗರ ತರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಚನ್ನಿ ಹಾಗೂ ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ನಡುವೆ ಸಿಎಂ ಸ್ಥಾನಕ್ಕೆ ತಣ್ಣನೆಯ ಪೈಪೋಟಿ ನಡೆಯುತ್ತಿದೆ. ಅದರ ನಡುವೆಯೇ ಕಾಂಗ್ರೆಸ್‌ ಸಿಕ್ಖ್ ವಿರೋಧಿ ಎನ್ನುವಂಥ ಹೇಳಿಕೆಯೊಂದು ಜಾಖಡ್‌ ನೀಡಿರುವುದು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next