Advertisement

ವಿರಾಟ್ ಕೊಹ್ಲಿಯ ಆ ಒಂದು ಹೇಳಿಕೆಯೇ ಇಷ್ಟೆಲ್ಲಾ ಮನಸ್ಥಾಪಕ್ಕೆ ಕಾರಣ: ಸುನೀಲ್ ಗಾವಸ್ಕರ್

10:12 AM Dec 16, 2021 | Team Udayavani |

ಮುಂಬೈ: ಕಳೆದ ಕೆಲವು ದಿನಗಳಿಂದ ಭಾರತ ತಂಡದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಇದೀಗ ಮತ್ತೊಂದು ಹಂತ ತಲುಪಿದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಬದಲಾಗೊ ಬಿಸಿಸಿಐ ಗೆ ಟಾಂಗ್ ನೀಡಿದ್ದಾರೆ.

Advertisement

ನಾಯಕತ್ವ ಬದಲಾವಣೆ ಕುರಿತಂತೆ ಟಿ20 ನಾಯಕತ್ವ ಬಿಡದಂತೆ ಕೇಳಲಾಗಿತ್ತು ಎಂಬ ಗಂಗೂಲಿ ಹೇಳಿಕೆಗೆ ವಿರಾಟ್ ತಿರುಗೇಟು ನೀಡಿದ್ದು, ನನ್ನಲ್ಲಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಮಾಜಿ ಆಟಗಾರ ಸುನೀಲ್ ಗಾವಸ್ಕರ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಟಿ 20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದಾಗ ಕೊಹ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಗಾವಸ್ಕರ್ ಹೇಳಿದ್ದಾರೆ. ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಗಾವಸ್ಕರ್, ಕೊಹ್ಲಿ ತನ್ನ ವಿದಾಯ ಪತ್ರದಲ್ಲಿ ಬರೆದ ಸಾಲಿನಿಂದ ಬಿಸಿಸಿಐನ ಉನ್ನತ ಅಧಿಕಾರಿಗಳ ಭಾವನೆಗಳಿಗೆ ನೋವುಂಟು ಮಾಡಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ:ವನಿತಾ ಏಕದಿನ ವಿಶ್ವಕಪ್‌ -2022: ಭಾರತದ ಮೊದಲ ಎದುರಾಳಿ ಪಾಕಿಸ್ಥಾನ

ವಿದಾಯ ಪತ್ರದಲ್ಲಿ ವಿರಾಟ್, “ಇನ್ನು ಮುಂದೆ ನಾನು ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ” ಎಂದು ಬರೆದುಕೊಂಡಿದ್ದರು.

Advertisement

“ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಅವರು ನಾಯಕರಾಗುತ್ತಾರೆ ಎಂಬ ಸಾಲುಗಳು ಅವರ ವಿರುದ್ಧ ಈ ಸಣ್ಣ ವಿರೋಧಿ ಭಾವನೆ ಇರಲು ಒಂದು ಕಾರಣವಾಗಿರಬಹುದು. ಇಲ್ಲದಿದ್ದರೆ ಅವರು ಎಲ್ಲೆಡೆ ಗೆದ್ದ ದಾಖಲೆಗಳನ್ನು ಹೊಂದಿದ್ದಾರೆ. ಅವರು ಐಸಿಸಿ ಈವೆಂಟ್‌ಗಳನ್ನು ಗೆದ್ದಿಲ್ಲ ಆದರೆ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದ್ದಾರೆ. ತವರಿನಲ್ಲಿ ಅಥವಾ ವಿದೇಶದಲ್ಲಿ ಅವರು ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಹಾಗಾಗಿ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಜನರು ಅತೃಪ್ತಿ ಹೊಂದಲು ಯಾವುದೇ ಕಾರಣವಿಲ್ಲ. ಆದರೆ ಈ ಅತೃಪ್ತಿ ಪ್ರಾರಂಭವಾಗಲು ಒಂದು ಸಾಲು ಕಾರಣವಾಗಿರಬಹುದು ಎಂದು ನಾನು ಭಾವಿಸುತ್ತೇನೆ” ಎಂದು ಗಾವಸ್ಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next