Advertisement

ಮಂಗಳೂರು: ಜಿಲ್ಲಾಡಳಿತದ ಅವಕಾಶವಿದ್ದರೂ ತೆರೆದಿಲ್ಲ ತರಕಾರಿ, ಮೀನು ಮಾರುಕಟ್ಟೆ

01:35 PM May 24, 2020 | keerthan |

ಮಂಗಳೂರು: ಕೋವಿಡ್-19 ಕಾರಣ ಇಂದು ಸಂಪೂರ್ಣ ಲಾಕ್ ಡೌನ್ ಹಾಕಲಾಗಿದ್ದು, ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಬಂದ್ ಆಗಿದೆ. ಜಿಲ್ಲಾಡಳಿತ ಅವಕಾಶ ನೀಡಿದ್ದರೂ ತರಕಾರಿ ಮಾರುಕಟ್ಟೆಗಳು ತೆರೆದಿಲ್ಲ.

Advertisement

ಇಂದು ಸಂಪೂರ್ಣ ಲಾಕ್ ಡೌನ್ ಇದ್ದರೂ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ವ್ಯಾಪಾರಿಗಳು ಅಂಗಡಿಗಳನ್ನು ತೆರೆಯದೆ ಬಂದ್ ಗೆ ಬೆಂಬಲ ನೀಡಿದ್ದಾರೆ.

ಮಂಗಳೂರಿನ ಕದ್ರಿಯಲ್ಲಿರೋ ಮಲ್ಲಿಕಟ್ಟೆ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿದ್ದು, ಭಾಗಶಃ ಮಂಗಳೂರಿನಲ್ಲಿ ಇಂದು ಎಲ್ಲಾ ತರಕಾರಿ ಮಾರುಕಟ್ಟೆ ಮುಚ್ಚಿವೆ. ಮೀನು-ಮಾಂಸ ಕೂಡ ಇಂದು ಸಿಗುವುದು ಅನುಮಾನ ಎನ್ನಲಾಗಿದೆ.

ನಗರದಲ್ಲಿ ಖಾಸಗಿ ಹಾಗೂ ಸಾರ್ವಜನಿಕ ವಾಹನಗಳು ರಸ್ತೆಗಿಳಿದಿಲ್ಲ. ತಿಂಗಳುಗಳ ಬಳಿಕ ಕೆಲವು ದಿನಗಳ ಕಾಲ ಸ್ವಲ್ಪ ಬ್ಯುಸಿಯಾಗಿದ್ದ ರಸ್ತೆಗಳು ಮತ್ತೆ ಬಣಗುಟ್ಟುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next