Advertisement

ಸುಳೇಭಾವಿ ಜೋಡಿ ಕೊಲೆ ಪ್ರಕರಣ: ಆರು ಮಂದಿ ಹಂತಕರ ಬಂಧನ

01:00 PM Oct 08, 2022 | Team Udayavani |

ಬೆಳಗಾವಿ: ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಹಂತಕರನ್ನು ಬಂಧಿಸುವ ಮೂಲಕ ಯಶಸ್ವಿಯಾಗಿದ್ದಾರೆ.

Advertisement

ಸುಳೇಭಾವಿ ಗ್ರಾಮದ ಶಶಿಕಾಂತ ಅಲಿಯಾಸ್ ಸಸಾ ಅಲಿಯಾಸ್ ಜುಟ್ಟು ಭೀಮಶಿ‌ ಮಿಸಾಳೆ (24), ಯಲ್ಲೇಶ ಸಿದರಾಯಿ ಹುಂಕರಿಪಾಟೀಲ (22), ಮಂಜುನಾಥ ಶಿವಾಜಿ ಪರೋಜಿ (22), ದೇವಪ್ಪ ರವಿ ಕುಕಡೊಳ್ಳಿ (26), ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ‌ ಹಣಬರಟ್ಟಿ (20), ಭರಮಣ್ಣ ನಾಗಪ್ಪ ನಾಯಕ (20) ಎಂಬವರನ್ನು ಬಂಧಿಸಲಾಗಿದೆ.‌

ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಢಸಿದಾಗ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆರು ಜನರ ಪೈಕಿ ಕೆಲವರು ಕಟ್ಟಡ ಕಾರ್ಮಿಕನಾಗಿದ್ದರು. ಇನ್ನುಳಿದವರು ಕೆಲಸ ಇಲ್ಲದೇ ಖಾಲಿ ಇದ್ದರು. ಎರಡು ಗ್ಯಾಂಗ್ ಕಟ್ಟಿಕೊಂಡು ಜಗಳವಾಡಿ ಇಬ್ಬರ‌ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆ ಭಾರತ ತಂಡದೊಂದಿಗೆ ಹೊರಟ ಇಬ್ಬರು ಎಡಗೈ ವೇಗಿಗಳು

ತಾಲೂಕಿನ ಸುಳೇಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ‌ ಎದುರು ಗುರುವಾರ ರಾತ್ರಿ ಹಳೆಯ ದ್ವೇಷ ಹಿನ್ನೆಲೆಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಸುಳೇಭಾವಿ ಗ್ರಾಮದ ರಣಧೀರ ಉರ್ಫ ಮಹೇಶ ರಾಮಚಂದ್ರ ಮುರಾರಿ (26) ಹಾಗೂ ಪ್ರಕಾಶ ನಿಂಗಪ್ಪ ಹುಂಕರಿಪಾಟೀಲ (24) ಎಂಬ ಯುವಕರ ಹತ್ಯೆ ಮಾಡಲಾಗಿತ್ತು.

Advertisement

ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಮಾರೀಹಾಳ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next