Advertisement

ಕೆರೆ ಒತ್ತುವರಿದಾರರ ವಿರುದ್ಧ ಸೂಕ್ತ ಕ್ರಮ

08:14 PM Apr 05, 2021 | Team Udayavani |

ಹಗರಿಬೊಮ್ಮನಹಳ್ಳಿ: ಕೆರೆಗಳು ರೈತರ ಜೀವನಾಡಿಗಳು ತಾಲೂಕಿನ ಯಾವುದೇ ಕೆರೆಗಳನ್ನು ಯಾರೇ ಒತ್ತುವರಿಮಾಡಿಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಶರಣಮ್ಮ ಎಚ್ಚರಿಕೆ ನೀಡಿದರು.

Advertisement

ತಾಲೂಕಿನ ಬೆಣಕಲ್ಲು ಗ್ರಾಪಂ ವ್ಯಾಪ್ತಿಯ ಮೂರು ಕೆರೆಗಳ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವ ದೂರಿನ ಹಿನ್ನೆಲೆಯಲ್ಲಿ ಇಒ ಹಾಲಸಿದ್ದಪ್ಪ ಪೂಜೇರಿ ಸೇರಿ ಇತರೆ ಅಧಿಕಾರಿಗಳ ತಂಡದೊಂದಿಗೆ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಕೆರೆಗಳು ಅಂತರ್ಜಲ ಹೆಚ್ಚಿಸುವ ಜೊತೆಗೆ ಕುಡಿಯುವ ನೀರನ ಬವಣೆ ನೀಗಿಸುತ್ತವೆ. ಸಾರ್ವಜನಿಕರ ದನಕರುಗಳಿಗೆ ಕುಡಿಯುವ ನೀರಿನ ಅನುಕೂಲವಾಗುವ ಉದ್ದೇಶದಿಂದ ಕೆರೆಗಳನ್ನು ನಿರ್ಮಾಣ ಮಾಡಿರಲಾಗಿರುತ್ತದೆ ಎಂಬುದನ್ನು ಒತ್ತುವರಿದಾರರು ಅರ್ಥಮಾಡಿಕೊಳ್ಳಬೇಕು. ಮಳೆ ನೀರು ಸಂಗ್ರಹಕ್ಕೆ ಕಂಟಕವಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ತಾಲೂಕಿನ ಎಲ್ಲ ಕೆರೆಗಳ ವಿಸ್ತೀರ್ಣ ಕುರಿತು ದಾಖಲೆಗಳನ್ನು ತೆಗೆದುಕೊಂಡು ಹದ್ದುಬಸ್ತು ಮಾಡಲಾಗುವುದು. ಸರ್ವೇ ಅಧಿ ಕಾರಿಗಳಿಂದ ಕೂಡಲೇ ಕೆರೆಗಳ ಮಾಹಿತಿ ಪಡೆದುಕೊಂಡು ಒತ್ತುವರಿದಾರರ ವಿರುದ್ಧ ಕ್ರಮಕೈಗೊಂಡು ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು. ತಾಪಂ ಇಒ ಹಾಲಸಿದ್ದಪ್ಪ ಪೂಜೇರಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನ ಕೆರೆಗಳಲ್ಲಿ ಹೂಳೆತ್ತುವ ಕಾರ್ಯಕ್ರಮ ಹಮ್ಮಿಕೊಂಡು ಕೆರೆಗಳನ್ನು ಪುನರುಜ್ಜೀವನಗೊಳಿಸಲಾಗುವುದು. ಓಡುವ ನೀರನ್ನು ತಡೆಯುವುದು ಪ್ರತಿಯೊಬ್ಬರ ಕರ್ತವ್ಯ, ಕೆರೆ ಒತ್ತುವರಿ ಮಾಡುವವರು ಬೇಸಿಗೆಯ ಬವಣೆಯನ್ನು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು.

ನರೇಗಾ ಸಹಾಯಕ ನಿರ್ದೆಶಕ ಕೆ.ಎಸ್‌.ಮಲ್ಲನಗೌಡ್ರು, ಸರ್ವೇ ಅಧಿಕಾರಿ ಶಶಿಕಲಾ, ಗ್ರಾಮ ಲೆಕ್ಕಾಧಿ ಕಾರಿ ಗಣೇಶ್‌, ಬೆಣಕಲ್ಲು ಗ್ರಾ.ಪಂ.ಪಿಡಿಒ ಶ್ರೀಕಾಂತ ಗ್ರಾಮಸ್ಥರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next