Advertisement

ದಂಡಕ್ಕೆ ಆತ್ಮಹತ್ಯೆ ಬೆದರಿಕೆ

10:11 AM Sep 18, 2019 | sudhir |

ಹೈದರಾಬಾದ್‌/ನವದೆಹಲಿ: ಮೋಟಾರು ವಾಹನ ಕಾಯ್ದೆಯ ಹೊಸ ನಿಯಮದ ಅನ್ವಯ ದಂಡ ವಿಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಸಾರಿಗೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ನವದೆಹಲಿಯಲ್ಲಿ ಶನಿವಾರ ಈ ಘಟನೆ ನಡೆದಿದೆ.

Advertisement

ರಾಷ್ಟ್ರ ರಾಜಧಾನಿಯ ಕಾಶ್ಮೀರಿ ಗೇಟ್‌ ಬಳಿ ಮಹಿಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ವೇಳೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ಅದನ್ನು ಕಂಡು ಅಧಿಕಾರಿಗಳು ಅವರನ್ನು ನಿಲ್ಲಿಸಿದರು. ಕೂಡಲೇ ಮಹಿಳೆ ಬೊಬ್ಬೆ ಹಾಕಲಾರಂಭಿಸಿದರು ಮತ್ತು ದಂಡ ವಿಧಿಸಬಾರದೆಂದು ಮನವಿ ಮಾಡಿಕೊಂಡರು. ಅಧಿಕಾರಿಗಳು ಒಪ್ಪದೇ ಇದ್ದಾಗ ಆತ್ಮಹತ್ಯೆ ಮಾಡಿಕೊಳ್ಳುವೆನೆಂದು ಬೆದರಿಕೆ ಹಾಕಿದರು. ಸುಮಾರು 20 ನಿಮಿಷಗಳ ಕಾಲ ಈ ವಾಗ್ವಾದ, ಕೋಲಾಹಲ ಮುಂದುವರಿಯಿತು. ಅಂತಿಮವಾಗಿ ಸೋತ ಅಧಿಕಾರಿಗಳು ಆಕೆಯನ್ನು ಹೋಗಗೊಟ್ಟರು.

ದಂಡ ನೀಡಿ ಹಿಂಪಡೆದರು: ಡೆಹ್ರಾಡೂನ್‌ನಲ್ಲಿ ಎತ್ತಿನ ಗಾಡಿಗೆ ದಂಡ ವಿಧಿಸಲಾಗಿದೆ. ಶನಿವಾರ ಈ ಘಟನೆ ನಡೆದಿದೆ. ಪರಿಶೀಲನೆಯ ಬಳಿಕ ಎತ್ತಿನ ಗಾಡಿಗೆ ದಂಡ ವಿಧಿಸಲು ಅವಕಾಶವಿಲ್ಲ ಎಂದು ಗೊತ್ತಾದ ಬಳಿಕ ಚಲನ್‌ ರದ್ದು ಮಾಡಲಾಗಿದೆ.

ಜಾರಿ ಮಾಡಲ್ಲ: ದೇಶಾದ್ಯಂತ ಜಾರಿಗೊಂಡಿರುವ ಹೊಸ ಸಾರಿಗೆ ನಿಯಮಗಳನ್ನು ಜಾರಿ ಮಾಡುವುದಿಲ್ಲ ಎಂದು ತೆಲಂಗಾಣ ಸಿಎಂ ಚಂದ್ರಶೇಖರ ರಾವ್‌ ಹೇಳಿದ್ದಾರೆ. ಅವರು ತೆಲಂಗಾಣ ವಿಧಾನಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದಾರೆ. “ಹೆಚ್ಚಿನ ಪ್ರಮಾಣದ ದಂಡ ವಿಧಿಸುವ ಮೂಲಕ ಜನರಿಗೆ ಕಿರುಕುಳ ನೀಡಲು ಬಯಸುತ್ತಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next