Advertisement

ವಿವಾಹ ಬೇಡವೆಂದು ಆತ್ಮಹತ್ಯೆ

12:27 PM Nov 24, 2017 | Team Udayavani |

ಬೆಂಗಳೂರು: ಸೆಸ್ನಾ ಟೆಕ್‌ ಪಾರ್ಕ್‌ ಆವರಣದಲ್ಲಿ ಬುಧವಾರ ಹತ್ತನೇ ಮಹಡಿಯಿಂದ ಬಿದ್ದು ಸಾವಿಗೆ ಶರಣಾದ ಟೆಕ್ಕಿ ಗೀತಾಂಜಲಿ ಆತ್ಮಹತ್ಯೆ ಹಿಂದಿನ ರಹಸ್ಯ ಇದೀಗ ಬಯಲಾಗಿದೆ. ಗೀತಾಂಜಲಿ ಶವ ಪಡೆಯಲು ಗೋವಾದಿಂದ ನಗರಕ್ಕೆ ಬಂದಿದ್ದ ಆಕೆಯ ಪೋಷಕರನ್ನು ಮಾರತ್‌ಹಳ್ಳಿ ಪೊಲೀಸರು ವಿಚಾರಣೆ ನಡೆಸಿದಾಗ ಆತ್ಮಹತ್ಯೆಗೆ ಬಲವಂತದ ವಿವಾಹ ಕಾರಣ ಎಂದು ತಿಳಿದು ಬಂದಿದೆ.

Advertisement

“ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರ ಚಿಕ್ಕಮ್ಮನ ಜತೆ ಗೀತಾಂಜಲಿ ಗೋವಾದಲ್ಲಿನ ಮನಗೆ ಬಂದಿದ್ದಳು. ಹುಟ್ಟುಹಬ್ಬದ ಸಂಭ್ರಮದ ಜತೆಗೆ ಆಕೆಗೆ ನಿಶ್ಚಿತಾರ್ಥ ನಿಶ್ಚಯ ಮಾಡಿದ್ದೆವು. ಆದರೆ, ಅದು ಆಕೆಗೆ ಇಷ್ಟವಿರಲಿಲ್ಲ. ಆದರೂ ಮದುವೆಗೆ ಒಪ್ಪಿಕೊಳ್ಳುವಂತೆ ನಾವು ಬಲವಂತ ಮಾಡಿದ್ದೆವು. ಈ ನಿರ್ಧಾರದಿಂದ ಆಕೆ ಮನನೊಂದಿದ್ದಳು.

ಈ ಕಾರಣಕ್ಕೇ ಗೀತಾಂಜಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,’ ಎಂದು ಪೋಷಕರು ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಗೀತಾಂಜಲಿ ಮತ್ತೂಬ್ಬ ಯುವಕನನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಇದೇ ಕಾರಣಕ್ಕೆ ಪೋಷಕರು ಗೊತ್ತು ಮಾಡಿದ್ದ ಮದುವೆಗೆ ನಿರಾಕರಿಸಿದ್ದರು ಎಂದು ಹೇಳಲಾಗಿದೆ.

ಮಾರತ್‌ಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಸೆಸ್ನಾ ಟೆಕ್‌ ಪಾರ್ಕ್‌ನಲ್ಲಿ ತನ್ನ ಕಚೇರಿ ಇದ್ದ ಬಹುಮಹಡಿ ಕಟ್ಟಡದ ಹತ್ತನೇ ಮಹಡಿಯಿಂದ ಬಿದ್ದು ಗೋವಾ ಮೂಲದ ಗೀತಾಂಜಲಿ (27) ಆತ್ಮಹತ್ಯೆ ಮಾಡಿಕೊಂಡಿದ್ದರು. ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿತ್ತು. ಗೀತಾಂಜಲಿ ಬನ್ನೇರುಘಟ್ಟದಲ್ಲಿ ವಾಸವಾಗಿರುವ ತನ್ನ ಚಿಕ್ಕಮ್ಮನ ಜತೆ ಗೋವಾಕ್ಕೆ ತೆರಳಿ, ಮಂಗಳವಾರ ತನ್ನ ಕುಟುಂಬದವರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು, ವಿಮಾನದಲ್ಲಿ ಬೆಂಗಳೂರಿಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next