Advertisement

ಮನೆಯಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

02:45 AM Jul 14, 2017 | Harsha Rao |

ರಾಣಿಬೆನ್ನೂರ: ಹಣಕಾಸಿನ ತೊಂದರೆಯಿಂದ ಮನನೊಂದ ವ್ಯಾಪಾರಿಯೊಬ್ಬರು ಆತ್ಮರಕ್ಷಣೆಗೆ ಪಡೆದಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಗುರುವಾರ ನಡೆದಿದೆ, ದೊಡ್ಡಕೊಟ್ರೇಶಯ್ಯ ಏಕಾಂಬರಯ್ಯ ಸುತ್ತಿನಬಾವಿಮಠ (45) ಆತ್ಮಹತೆಗೆ ಶರಣಾದ ವ್ಯಕ್ತಿ. ಶಾಲೆಗೆ ಹೋಗಿದ್ದ ಮಗಳಿಗೆ ತಿಂಡಿ ಕೊಟ್ಟು ಬರಲು ಪತ್ನಿಯನ್ನು ಒತ್ತಾಯಪೂರ್ವಕವಾಗಿ ಕಳುಹಿಸಿದ ದೊಡ್ಡಕೊಟ್ರೇಶಯ್ಯ,
ಮನೆಯಲ್ಲಿ ಒಬ್ಬರೇ ಉಳಿದು ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ.

Advertisement

ಮೃತರು ಆತ್ಮರಕ್ಷಣೆಗಾಗಿ ಪರವಾನಿಗೆ ಹೊಂದಿದ್ದ ಗನ್‌ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ದಾವಣಗೆರೆಯ ವಿಧಿವಿಜ್ಞಾನ, ಬೆರಳಚ್ಚು ತಜ್ಞರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next