Advertisement

ಕಬ್ಬು ತುಂಬಿದ ಲಾರಿ ಪಲ್ಟಿ: ಚಾಲಕ ಸಾವು

09:40 AM Feb 25, 2022 | Team Udayavani |

ಆಳಂದ: ತಾಲೂಕಿನ ನಿಂಬಾಳ ಚಳಗೇರಾ ಹತ್ತಿರ ಕಬ್ಬಿನ ಲಾರಿ ಪಲ್ಟಿಯಾಗಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

Advertisement

ಮಹಾರಾಷ್ಟ್ರದ ಉಮರ್ಗಾದಿಂದ ದುಧನಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ಮಾರ್ಗಮಧ್ಯೆ ನಿಂಬಾಳ ಕೆರೆ ಹತ್ತಿರ ಈ ಘಟನೆ ನಡೆದಿದೆ.

ಮಾದನಹಿಪ್ಪರಗಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಚಾಲಕನ ಹೆಸರು ತಿಳಿದುಬಂದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next