Advertisement

Sugar factory; ಎಥೆನಾಲ್‌ಗೆ ಕಬ್ಬಿನ ರಸ ಬಳಸದಿರಿ: ಕೇಂದ್ರ ಸರಕಾರ ನಿರ್ದೇಶನ 

12:38 AM Dec 08, 2023 | Team Udayavani |

ಹೊಸದಿಲ್ಲಿ: ದೇಶೀಯ ಬಳಕೆಗೆ ಸಾಕಷ್ಟು ಸಕ್ಕರೆ ಪೂರೈಕೆಗೆ ಹಾಗೂ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಕಬ್ಬಿನ ರಸವನ್ನು ಎಥೆನಾಲ್‌ ಉತ್ಪಾದನೆಗೆ ಬಳಸದಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಹಾಗೂ ಡಿಸ್ಟಿಲರಿಗಳಿಗೆ ಕೇಂದ್ರ ಸರಕಾರ ಗುರುವಾರ ನಿರ್ದೇಶನ ನೀಡಿದೆ.

Advertisement

ಈ ಸಂಬಂಧ ಸಕ್ಕರೆ ಕಾರ್ಖಾನೆಗಳು ಹಾಗೂ ಡಿಸ್ಟಿಲರಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿಗಳಿಗೆ ಕೇಂದ್ರ ಆಹಾರ ಸಚಿವಾಲಯ ಪತ್ರ ಬರೆದಿದೆ. ಆದಾಗ್ಯೂ, ತೈಲ ಮಾರುಕಟ್ಟೆ ಕಂಪೆನಿಗಳಿಗೆ ಬಿ-ಹೆವಿ ಮೊಲ್ಯಾಸಸ್‌(ಕಾಕಂಬಿ)ನಿಂದ ಉತ್ಪಾದಿಸಲಾದ ಎಥೆನಾಲ್‌ ಪೂರೈಕೆ ಮುಂದುವರಿಯಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next