Advertisement

ಸಿಎಂ ತಲೆಯಲ್ಲಿ ಶುಗರ್‌ ಕೋಟೆಡ್‌ ಯೂರಿಯಾ ತುಂಬಿದೆ

06:05 AM Mar 09, 2018 | Team Udayavani |

ಬಾಗಲಕೋಟೆ: ನನ್ನ ತಲೆಯಲ್ಲಿ ಬುದ್ಧಿಯಿಲ್ಲ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ತಲೆಯಲ್ಲಿ ಮೆದುಳು ಬಿಟ್ಟರೆ ಉಳಿದಿದ್ದು ಶುಗರ್‌ ಕೊಟೇಡ್‌ ಯೂರಿಯಾ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಟೀಕಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತಲೆ ಇದೆಯೋ ಇಲ್ವೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಆದರೆ, ಸಿದ್ದರಾಮಯ್ಯ ತಲೆಯಲ್ಲಿ ಮೆದುಳು ಬಿಟ್ಟರೆ ಶುಗರ್‌ ಕೊಟೇಡ್‌ ಯೂರಿಯಾ ಗೊಬ್ಬರ ತುಂಬಿಕೊಂಡಿದೆ. ಅದಕ್ಕೆ ಅವರು ಮಾತನಾಡುವ ಮಾತುಗಳೇ ಸಾಕ್ಷಿ ಎಂದರು.

ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಸಿಎಂ ಟೀಕಿಸುತ್ತಾರೆ. ಆದರೆ, ಹೊಸಪೇಟೆ ಶಾಸಕ ಆನಂದ ಸಿಂಗ್‌, ಕೂಡ್ಲಗಿ ಶಾಸಕ ನಾಗೇಂದ್ರ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾರೆ. ಅವರೇನು ಸ್ವರ್ಗಕ್ಕೆ ಹೋಗಿ ಬಂದವರಾ? ಅಶೋಕ ಖೇಣಿ ಒಬ್ಬ ಮಹಾನ್‌ ಭ್ರಷ್ಟ. ಅಂತವರನ್ನು ಪಕ್ಷಕ್ಕೆ ಕರೆದುಕೊಂಡಿದ್ದಾರೆ. ಭ್ರಷ್ಟರನ್ನು ಪಕ್ಷಕ್ಕೆ ಬರ ಮಾಡಿಕೊಂಡರೆ ಇವರೂ ಭ್ರಷ್ಟರೇ ಅಲ್ವಾ? ಎಂದು ವ್ಯಂಗ್ಯವಾಡಿದರು.

ಕೂಡಲಸಂಗಮದಲ್ಲಿ ಮಾ.10ರಂದು ನಡೆಯಬೇಕಿದ್ದ ಬಿಜೆಪಿ ಒಬಿಸಿ ಸಮಾವೇಶವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಅಮಿತ್‌ ಶಾ ಅವರಿಗೆ ಸಮಯಾವಕಾಶದ ಅಭಾವ ಇರುವುದರಿಂದ ಸಮಾವೇಶ ಮುಂದೂಡಲಾಗಿದೆ. ಮಾ.25ರಂದು ಕಾಗಿನೆಲೆಯಲ್ಲಿ ಒಬಿಸಿ ಸಮಾವೇಶ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next