Advertisement

ಜಮ್ಮು ಕಾಶ್ಮೀರದ ಉರಿಯ ಸೂಫಿ ಮಂದಿರಕ್ಕೆ ಸಿಡಿಲು ಬಡಿದು ಹಾನಿ

04:16 PM Mar 14, 2018 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಬಾರಾ ಮುಲಾ ಜಿಲ್ಲೆಯಲ್ಲಿನ ಉರಿ ಪ್ರದೇಶದಲ್ಲಿರುವ ಬಾಬಾ ಫ‌ರೀದ್‌ ಶಕಾರ್‌ಗಂಜ್‌ ಸೂಫಿ ಮಂದಿರ ಇಂದು ಭಾರೀ ಸಿಡಿಲು ಬಡಿದು ಹಾನಿಗೀಡಾಯಿತು.

Advertisement

ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲವೆಂದು ವರದಿಗಳು ತಿಳಿಸಿವೆ. 

ಬಾಬಾ ಫ‌ರೀದ್‌ ಸೂಫಿ ಮಂದಿರವು ಗಡಿ ನಿಯಂತ್ರಣ ರೇಖೆಗೆ ಸಮೀಪದ ಉರಿಯ ಘಾರ್‌ಕೋಟ್‌ ಪ್ರದೇಶದಲ್ಲಿದೆ. ಮರ, ಕಲ್ಲು, ಮಣ್ಣಿನಿಂದ ನಿರ್ಮಾಣವಾಗಿದ್ದ ಈ ಮಂದಿರಕ್ಕೆ ಇಂದು ನಸುಕಿನ ವೇಳೆ ಸಿಡಿಲಾಘಾತವಾಯಿತು. ಈ ಪ್ರಾರ್ಥನಾ ಮಂದಿರಕ್ಕೆ ಎಲ್‌ಓಸಿಯ ಎರಡೂ ಕಡೆಯ ಜನರು ಮತ್ತು ಸುತ್ತಮುತ್ತಲಿನವರು ಬಂದು ಪ್ರಾರ್ಥನೆ ಸಲ್ಲಿಸುತ್ತಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next