Advertisement

ಬೊಮ್ಮಾಯಿ ಮಾಮಾಗೆ ಸುದೀಪ್‌ ಬೆಂಬಲ: ಸಿಎಂ ಕಾಲೆಳೆದ Congress

07:49 PM Apr 07, 2023 | Team Udayavani |

ಬೆಂಗಳೂರು: ವಾಲ್ಮೀಕಿ ಸಮುದಾಯದ ಮೀಸಲಾತಿಗೆ ಸಂಬಂಧಿಸಿ ಹೋರಾಟ ಆರಂಭಿಸುವಾಗಲೇ ನಾಯಕ ನಟ ಸುದೀಪ್‌ ಅವರು ಬೊಮ್ಮಾಯಿ ಮಾಮಾ ಜತೆ ಮಾತುಕತೆ ನಡೆಸಿದ್ದರೆ ಆ ಸಮುದಾಯದ ಸ್ವಾಮೀಜಿ ನೂರಾರು ದಿನ ಸತ್ಯಾಗ್ರಹ ನಡೆಸುವ ಶ್ರಮ ತಪ್ಪುತ್ತಿತ್ತು. ಆಗ ಆ ಪ್ರಯತ್ನ ಯಾಕೆ ಮಾಡಲಿಲ್ಲ ಗೊತ್ತಾಗುತ್ತಿಲ್ಲ!

Advertisement

– ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಚೆಗೆ ಬೆಂಬಲ ಘೋಷಿಸಿದ ನಾಯಕ ನಟ ಸುದೀಪ್‌ ಅವರನ್ನು ಕಾಂಗ್ರೆಸ್‌ ಕಾಲೆಳೆದ ರೀತಿ.
ಬೊಮ್ಮಾಯಿ ಮಾಮಾ ಅವರಿಗೆ ಮೊದಲೇ ಸುದೀಪ್‌ ಅವರು ಬೆಂಬಲ ಕೊಟ್ಟಿದ್ದರೆ ವಾಲ್ಮೀಕಿ ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಎಷ್ಟೊಂದು ಅನುಕೂಲ ಆಗುತ್ತಿತ್ತು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಪ್ರಿಯಾಂಕ್‌ ಖರ್ಗೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತೀಕ್ಷ್ಣವಾಗಿ ಹೇಳಿದರು.
ಒಂದು ವೇಳೆ ನೈತಿಕ ಬೆಂಬಲವನ್ನಾದರೂ ಕೊಟ್ಟಿದ್ದರೂ ಸಾಕಿತ್ತು. ಬೊಮ್ಮಾಯಿ ಮಾಮಾ ಮೀಸಲಾತಿ ನೀಡುತ್ತಿದ್ದರು ಎಂದು ಸೂಚ್ಯವಾಗಿ ಚುಚ್ಚಿದ ಅವರು, ಕಿಚ್ಚ ಸುದೀಪ್‌ ಬೆಂಬಲ ಘೋಷಿಸಿದ್ದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ 40 ಪರ್ಸೆಂಟ್‌ ಕಮಿಷನ್‌ ಆರೋಪ ಎದುರಿಸುತ್ತಿರುವ ಹಾಗೂ ಯುವಕರ ಉದ್ಯೋಗಗಳನ್ನು ಮಾರಾಟ ಮಾಡಿಕೊಂಡ ಒಂದು ಭ್ರಷ್ಟ ಸರಕಾರದ ಪರವಾಗಿ ಒಬ್ಬ ಯೂತ್‌ ಐಕಾನ್‌ ಹಾಗೂ ಸ್ಟಾರ್‌ ನಟ ಬೆಂಬಲ ಸೂಚಿಸಿರುವುದು ವೈಯಕ್ತಿಕವಾಗಿ ನನಗೆ ಬೇಸರ ತಂದಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next