Advertisement

ವಿಜಯಲಕ್ಷ್ಮೀ ಸಂಕಷ್ಟಕ್ಕೆ ಕಿಚ್ಚನ ಸಹಾಯ ಹಸ್ತ

05:35 AM Feb 26, 2019 | |

ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮೀ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಅನುಭವಿಸುತ್ತಿರುವ ವಿಜಯಲಕ್ಷ್ಮೀ ಆಸ್ಪತ್ರೆಯಲ್ಲಿ ತಮ್ಮ ಚಿಕಿತ್ಸಾ ವೆಚ್ಚವನ್ನು ಭರಿಸಲು ಪರದಾಡುತ್ತಿದ್ದು, ಚಿತ್ರರಂಗದಿಂದ ಸಹಾಯ ಮಾಡುವಂತೆ ಅವರ ಕುಟುಂಬದ ಸದಸ್ಯರು ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದರು.

Advertisement

ಅದಾದ ಬಳಿಕ ಚಿತ್ರರಂಗದಿಂದಲೂ ವಿಜಯಲಕ್ಷ್ಮೀ ಅವರಿಗೆ ನೆರವು ಹರಿದು ಬರಲು ಶುರುವಾಗಿದೆ. ಅನೇಕ ಚಿತ್ರತಂಡಗಳು, ಕಲಾವಿದರು ವಿಜಯಲಕ್ಷ್ಮೀ ಅವರಿಗೆ ನೆರವು ನೀಡುತ್ತಿದ್ದಾರೆ. ಇದರ ನಡುವೆಯೇ ನಟ ಸುದೀಪ್‌ ಕೂಡ ವಿಜಯಲಕ್ಷ್ಮೀ ಅವರ ನೆರವಿಗೆ ಮುಂದಾಗಿದ್ದಾರೆ. ವಿಜಯಲಕ್ಷ್ಮೀ ಅನಾರೋಗ್ಯದ ವಿಷಯ ತಿಳಿದು ಸುದೀಪ್‌ ಒಂದು ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡಿದ್ದಾರೆ.

ಈ ವಿಷಯವನ್ನು ಟ್ವೀಟ್‌ ಮೂಲಕ ತಿಳಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಬಾ.ಮಾ ಹರೀಶ್‌, ಸುದೀಪ್‌ಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಸುದೀಪ್‌ ಅವರ ಸಹಾಯ ಕಾರ್ಯಕ್ಕೆ ಚಿತ್ರೋದ್ಯಮದ ಅನೇಕರು, ಅವರ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next