Advertisement

ಆಕಸ್ಮಿಕ ಬೆಂಕಿ ತಗುಲಿ ಡೀಸೆಲ್ ಟ್ಯಾಂಕರ್ ಬಳಿಯಿದ್ದ 3 ಮನೆ ಭಸ್ಮ: ತಪ್ಪಿದ ಭಾರೀ ಅನಾಹುತ !

08:32 PM Dec 03, 2020 | Mithun PG |

ಗಂಗಾವತಿ: ಆಕಸ್ಮಿಕ ಬೆಂಕಿ ತಗುಲಿ ಮೂರು ಮನೆ ಭಸ್ಮವಾದ ಘಟನೆ ನೀಲಕಂಠೇಶ್ವರ ಕ್ಯಾಂಪ್ ಬಸ್ ಡಿಪೋ ಹಿಂದೆ ಜರುಗಿದೆ.

Advertisement

ಮನೆಯಲ್ಲಿ ಅಡುಗೆ ಮಾಡಿ ಎಲ್ಲರೂ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಮೂರು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಪಕ್ಕದ ಮನೆಯವರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದರಿಂದ ಕೂಡಲೇ ಅಗ್ನಿಶಾಮಕ ಎರಡು ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಿವೆ.

ಮನೆಯಲ್ಲಿ ಸಿಲಿಂಡರ್ ಹಾಗೂ ಮನೆಯ ಪಕ್ಕದಲ್ಲಿ ಕೆಎಸ್ ಆರ್ ಟಿಸಿ  ಬಸ್ ಡಿಪೋ ಇದ್ದು, ಡಿಸೆಲ್ ಟ್ಯಾಂಕರ್ ಪಕ್ಕದಲ್ಲಿ ಬೆಂಕಿ ಆಕಸ್ಮಿಕ ನಡೆದಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕ ವಾಹನ ಆಗಮಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ.

ಇದನ್ನೂ ಓದಿ:  ಬುರೇವಿ ಪ್ರಭಾವ: ಗಡಿ ಜಿಲ್ಲೆಯಲ್ಲಿ ತುಂತುರು ಮಳೆ, ಚಳಿಯ ತೀವ್ರತೆಗೆ ‘ಗಡಗಡ’ ನಡುಗಿದ ಜನ

ಇದನ್ನೂ ಓದಿ:   ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ 61ರ ವೃದ್ಧ; ಬಾಲಕಿ ಗರ್ಭಿಣಿಯಾದಾಗ ವಿಚಾರ ಬೆಳಕಿಗೆ

Advertisement

Advertisement

Udayavani is now on Telegram. Click here to join our channel and stay updated with the latest news.

Next