Advertisement

ಯಶಸ್ಸು ತಲೆಗೇರಿಲ್ಲ, ಎದೆಯಲ್ಲಿದೆ 

05:51 AM Jan 16, 2019 | |

ನಟ ಯಶ್‌ ಕೂಡಾ ಚಿತ್ರದ ಗೆಲುವಿನಿಂದ ಖುಷಿಯಾಗಿದ್ದಾರೆ. ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿದ ಜನತೆಗೆ ಧನ್ಯವಾದ ಹೇಳುವ ಯಶ್‌, “ಈ ಯಶಸ್ಸು ನಮ್ಮ ತಲೆಗೇರಿಲ್ಲ. ಅದು ನಮ್ಮ ಎದೆಯಲ್ಲಿದೆ. ಈ ಗೆಲುವಿಗೆ ನಾನೊಬ್ಬ ಕಾರಣವಲ್ಲ. ಇಡೀ ತಂಡ ಕಾರಣ. ಈ ತರಹದ ಸಿನಿಮಾ ಮಾಡಲು ತಾಕತ್‌ ಬೇಕು.

Advertisement

ಮೂರು ವರ್ಷ ಎಲ್ಲವನ್ನು ತಡೆದುಕೊಂಡು, ಸಿನಿಮಾ ಚೆನ್ನಾಗಿ ಬರಬೇಕೆಂದು ಗಟ್ಟಿಯಾಗಿ ನಿಂತ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಈ ಚಿತ್ರದ ನಿಜವಾದ ಹೀರೋ’ ಎಂದ ಯಶ್‌, ಮೂರು ವರ್ಷ ಎಲ್ಲವನ್ನು ಸಹಿಸಿಕೊಂಡು “ಕೆಜಿಎಫ್’ನ ಕಲಾವಿದರ, ತಂತ್ರಜ್ಞರ ಕುಟುಂಬಗಳಿಗೆ ಥ್ಯಾಂಕ್ಸ್‌ ಹೇಳಲು ಮರೆಯಲಿಲ್ಲ. 

ಎಲ್ಲಾ ಓಕೆ ಯಶ್‌ ಮುಂದಿನ ಸಿನಿಮಾ ಯಾವುದು, “ಕೆಜಿಎಫ್ ಚಾಪ್ಟರ್‌-2′ ಮಾಡ್ತಾರಾ ಅಥವಾ “ಮೈ ನೇಮ್‌ ಇಸ್‌ ಕಿರಾತಕ’ ಮಾಡ್ತಾರಾ ಎಂಬ ಪ್ರಶ್ನೆ ಸಹಜವಾಗಿಯೇ ಇದೆ. ಇದಕ್ಕೆ ಉತ್ತರಿಸುವ ಯಶ್‌, “ಕೆಜಿಎಫ್-2’ನ ದೊಡ್ಡ ಮಟ್ಟದಲ್ಲಿ, ವರ್ಲ್ಡ್ಕ್ಲಾಸ್‌ ಆಗಿ ಮಾಡಬೇಕೆಂಬ ಉದ್ದೇಶ ಇದೆ.

ಆ ನಿಟ್ಟಿನಲ್ಲಿ ತಯಾರಿ ಜೋರಾಗಿದೆ. “ಕಿರಾತಕ’ ಮೊದಲು ಆಗುತ್ತಾ ಅಥವಾ “ಕೆಜಿಎಫ್’ ಮಾಡೋದು ಎಂಬುದು ಇನ್ನೂ ಪಕ್ಕಾ ಆಗಿಲ್ಲ. ಎರಡೂ ನಮ್ಮ ಪ್ರೊಡಕ್ಷನ್‌ ಹೌಸ್‌ ಇದ್ದಂಗೆ. ಹಾಗಾಗಿ, ಯಾವುದು ಮಾಡಿದರೂ ಸಮಸ್ಯೆಯಿಲ್ಲ’ ಎಂದ ಯಶ್‌ ನಟ ಅನಂತ್‌ನಾಗ್‌ ಅವರಿಂದ ಕಲಿತ ನಟನಾ ಪಾಠವನ್ನು ನೆನಪಿಸಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next