Advertisement

Subramanya; ಅಕ್ರಮ ಮರಳು ಸಾಗಾಟ; ಪ್ರಕರಣ ದಾಖಲು

11:36 PM Jan 14, 2024 | Team Udayavani |

ಸುಬ್ರಹ್ಮಣ್ಯ:ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡ ಘಟನೆ ಕಡಬ ಸಮೀಪದ ನೂಜಿಬಾಳ್ತಿಲದಲ್ಲಿ ನಡೆದಿದೆ.

Advertisement

ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಯ ಭೂ ವಿಜ್ಞಾನಿ ವಸುಧಾ ಕೆ.ಯಂ. ಅವರು ಜ.13ರಂದು ರಾತ್ರಿ ಇಲಾಖಾ ವಾಹನದಲ್ಲಿ ಚಾಲಕನೊಂದಿಗೆ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕಣ್ವರೆ ಎಂಬಲ್ಲಿ ಲಾರಿಯೊಂದನ್ನು ತಡೆದಿದ್ದು, ಈ ವೇಳೆ ಲಾರಿ ಚಾಲಕನು ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಸುಮಾರು 8 ಮೆಟ್ರಿಕ್‌ ಟನ್‌ನಷ್ಟು ಸಾಮಾನ್ಯ ಮರಳು ಇರುವುದು ಕಂಡು ಬಂದಿದೆ.

ಮಾತ್ರವಲ್ಲದೇ ಮರಳು ಸಾಗಾಟ ಮಾಡಲು ಯಾವುದೇ ಪರವಾನಗಿ ಇಲ್ಲದಿರುವುದು ಕಂಡು ಬಂದಿದೆ. ಲಾರಿ ಚಾಲಕನು ಅಕ್ರಮವಾಗಿ ಎಲ್ಲಿಂದಲೋ ಮರಳನ್ನು ಕಳವು ಮಾಡಿಕೊಂಡು ಹೋಗುತ್ತಿರುವುದು ಪತ್ತೆಯಾಗಿದೆ. ಅಧಿಕಾರಿಗಳು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next