Advertisement

Subramanya ಬ್ಯಾಟರಿ ಕಳವು: ಮತ್ತೋರ್ವ ಆರೋಪಿ ಸೆರೆ

01:08 AM Jul 13, 2024 | Team Udayavani |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಮೆಸ್ಕಾಂ ಶಾಖೆಯಲ್ಲಿ ಮಾರ್ಚ್‌ನಲ್ಲಿ ನಡೆದಿದ್ದ ಬ್ಯಾಟರಿ ಕಳವು ಆರೋಪಿಗಳಲ್ಲಿ ಮತ್ತೋರ್ವನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

Advertisement

ಸುಬ್ರಹ್ಮಣ್ಯ ಮೆಸ್ಕಾಂ ಶಾಖೆಯಲ್ಲಿಒಟ್ಟು 8 ಬ್ಯಾಟರಿ ಕಳ್ಳತನವಾಗಿದ್ದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತು. ಇದಕ್ಕೆ ಸಂಬಂಧಿಸಿದಂತೆ ವೆಂಕಟೇಶ್‌ನನ್ನು ಈ ಮೊದಲೇ ಬಂಧಿಸಿ ಆತನಿಂದ ಹಣ ಹಾಗೂ ಬ್ಯಾಟರಿಗಳನ್ನು ವಶಪಡಿಕೊಳ್ಳಲಾಗಿತ್ತು. ಇದೀಗ ಇನ್ನೋರ್ವ ಆರೋಪಿ ಮುತ್ತುಮಣಿಯನ್ನು ಮಂಗಳೂರಿನಲ್ಲಿ ಸೆರೆ ಹಿಡಿಯಲಾಗಿದ್ದು, ಆತನಿಂದ ಕೃತ್ಯಕ್ಕೆ ಬಳಸಿದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ವಿಟ್ಲ ಹಾಗೂ ಸುಳ್ಯ ಠಾಣಾ ವ್ಯಾಪ್ತಿಯಲ್ಲೂ ಕಳ್ಳತನ ನಡೆಸಿದ್ದರು ಎನ್ನಲಾಗಿದೆ. ವೃತ್ತ ನಿರೀಕ್ಷಕ ಸತೀಶ್‌ ಹಾಗೂ ಸುಬ್ರಮಣ್ಯ ಠಾಣಾ ಎಸ್‌ಐ ಕಾರ್ತಿಕ್‌, ತನಿಖಾ ಎಸ್‌ಐ ಮಹೇಶ ಪಿ.. ನೇತೃತ್ವದಲ್ಲಿ ಸಿಬಂದಿ ಮಹೇಶ್‌, ಆಕಾಶ್‌, ಎಎಸ್‌ಐ ಕರುಣಾಕರ, ಸಂಧ್ಯಾ, ವಿಠಲ್‌ ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next