Advertisement

ಸುಬ್ರಹ್ಮಣ್ಯ ಇಬ್ಬರು ಕಳ್ಳ ಬೇಟೆಗಾರರ ಬಂಧನ

10:54 PM Jul 28, 2019 | sudhir |

ಸುಬ್ರಹ್ಮಣ್ಯ :ಸುಬ್ರಹ್ಮಣ್ಯ ಅರಣ್ಯ ವಿಭಾಗಕ್ಜೆ ಸೇರಿದ ದೇವರಗದ್ದೆ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕೂರು ಗ್ರಾಮದ ಚಾರ್ಮತ ನಿವಾಸಿ ನಿವ್ರತ್ತ ಸೈನಿಕ ಹೊನ್ನಪ್ಪ ಚಾರ್ಮತ ಮತ್ತು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ರಮೇಶ ಕಲ್ಲುಗುಡ್ಡೆ ಎಂಬಿಬ್ಬರನ್ನು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ರವಿವಾರ ವಶಕ್ಕೆ ಪಡೆದಿದ್ದಾರೆ.

Advertisement

ಖಚಿತ ಮಾಹಿತಿ ಧಾಳಿ ನಡೆಸಿದ ಸುಬ್ರಹ್ಮಣ್ಯ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಿಂದ ಕೆಂಜಾಲಿ ಪ್ರಾಣಿ ಬೇಟೆಯಾಡಿ ತರುತ್ತಿದ್ದಾಗ ದೇವರಗದ್ದೆ ಬಳಿ ಅವರಿಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವೇಳೆ ತಂಡದಲ್ಲಿ ಇನ್ನಿಬ್ಬರು ಇದ್ದು ಅವರು ಪರಾರಿಯಾಗಿದ್ದಾರೆ. ತಪ್ಪಿಸಿಕೊಂಡವರು ಸುಬ್ರಹ್ಮಣ್ಯ ಮಲೆ ಹಾಗೂ ಸುಬ್ರಹ್ಮಣ್ಯ ನೂಚಿಲ ಎಂಬುದಾಗಿ ಬಂಧಿತರು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.. ಬಂಧಿತರಿಂದ ನಾಡಕೋವಿ ಹಾಗೂ ಬೇಟೆಗೆ ಸಂಬಂಧಿಸಿದ ಸೊತ್ತುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ರಾತ್ರಿ ನ್ಯಾಯಧೀಶರ ಮುಂದೆ ಹಾಜರುಪಡಿಸುವ ಸಾದ್ಯತೆಯಿದೆ.ಘಟನೆಯಲ್ಲಿ ನಾಲ್ಕು ಮಂದಿ ಮೇಲು ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

ಡಿಸಿಎಪ್ ಕರಿಕಲನ್ ಮಾರ್ಗದರ್ಶನದಂತೆ ಸುಬ್ರಹ್ಮಣ್ಯ ಅರಣ್ಯ ವಿಭಾಗದ ರೇಂಜ್ ಪಾರೆಸ್ಟರ್ ತ್ಯಾಗರಾಜ್ ನೇತ್ರತ್ವದಲ್ಲಿ ಅರಣ್ಯ ಸಿಬಂಧಿಗಳ ತಂಡ ಈ ಧಾಳಿ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next