Advertisement

Subramanya ಹಲ್ಲೆ, ಜೀವ ಬೆದರಿಕೆ ಆರೋಪ

12:45 AM Jan 15, 2024 | Team Udayavani |

ಸುಬ್ರಹ್ಮಣ್ಯ: ಅಣ್ಣ ತಮ್ಮನಿಗೆ ಹಲ್ಲೆ ನಡೆಸಿದ ಘಟನೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ನಡೆದಿದ್ದು, ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರೆಂಜಿಲಾಡಿ ಗ್ರಾಮದ ಗಂಗಾಧರ (36) ಅವರು ಜ.13ರಂದು ಬೆಳಗ್ಗೆ ತನ್ನ ಮನೆಯ ಎದುರಿನಲ್ಲಿ ಬೆಳೆದಿರುವ ಕಳೆ ಹುಲ್ಲನ್ನು ತೆಗೆಯುತ್ತಿರುವಾಗ ಅವರ ಅಣ್ಣ ವಸಂತ ಅವರು ಅಲ್ಲಿಗೆ ಬಂದು ಹುಲ್ಲು ತೆಗೆಯುವ ವಿಚಾರದಲ್ಲಿ ತಕರಾರು ತೆಗೆದು, ಗಂಗಾಧರ ಹಾಗೂ ಅವರ ಪತ್ನಿಗೆ ಹಲ್ಲೆ ನಡೆಸಿದ್ದಾರೆ ಎಂದು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next