Advertisement

Subrahmanya: ಯುವಕನನ್ನು ಎಳೆದಾಡಿದ ದೇಗುಲದ ಆನೆ

11:27 PM Jun 26, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆಯು ಯುವಕನೊಬ್ಬನನ್ನು ಎಳೆದು ಹಾಕಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆ ಜೂ. 25ರಂದು ನಡೆದಿದೆ ಎನ್ನಲಾಗಿದೆ.

Advertisement

ಕುಕ್ಕೆಗೆ ಆಗಮಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಸ್ವಾಗತಿಸಲೆಂದು ಆನೆಯನ್ನು ಸವಾರಿ ಮಂಟಪದ ಸಮೀಪ ನಿಲ್ಲಿಸಲಾಗಿತ್ತು. ಇದೇ ವೇಳೆ ಅಲ್ಲಿನ ಲಾಡ್ಜ್ ಯೊಂದರ ರೂಂ ಬಾಯ್‌ ಆನೆಯ ಹತ್ತಿರ ಬಂದಿದ್ದು, ಆತ ಮದ್ಯ ಸೇವಿಸಿದ್ದ ಎನ್ನಲಾಗಿದೆ.

ಆತ ಆನೆಯ ಎದುರಿನಿಂದ ಸಾಗುವ ವೇಳೆ ಆನೆ ತನ್ನ ಸೊಂಡಿಲಿನಿಂದ ಆತನನ್ನು ಎಳೆದು ಹಾಕಿದ್ದು, ಆತ ನೆಲದ ಮೇಲೆ ಬಿದ್ದಿರುವುದು ವೀಡಿಯೋದಲ್ಲಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಮದ್ಯ ಸೇವಿಸಿದವರು ಹತ್ತಿರ ಬಂದರೆ ಆನೆ ಹೀಗೆ ಮಾಡುತ್ತಿದೆ ಎನ್ನಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next