Advertisement

Subrahmanya: ಕುಮಾರ ಧಾರೆಯಲ್ಲಿ ನೀರಿನ ಮಟ್ಟ ಇಳಿಕೆ

12:39 AM Jun 29, 2024 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶುಕ್ರವಾರ ಮಳೆ ಬಿಡುವು ನೀಡಿದ್ದು, ಸಂಜೆಯವರೆಗೂ ಬಿಸಿಲ ವಾತಾವರಣ ಕಂಡುಬಂದಿತ್ತು. ಇದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ.

Advertisement

ನಿರಂತರ ಮಳೆಗೆ ಗುರುವಾರ ಬೆಳಗ್ಗಿನಿಂದಲೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಇಲ್ಲಿನ ಕಿಂಡಿ ಅಣೆಕಟ್ಟು, ಸ್ನಾನ ಘಟ್ಟ ಮುಳುಗಡೆ ಯಾಗಿತ್ತು. ಸಂಜೆ ವೇಳೆಗೆ ನೀರಿನ ಮಟ್ಟ ಅಲ್ಪ ಇಳಿಕೆ ಕಂಡಿತ್ತು. ಶುಕ್ರವಾರ ಮಳೆ ಬಿಡುವು ನೀಡಿದ್ದರಿಂದ ನೀರಿನ ಮಟ್ಟ ಇಳಿಕೆ ಕಂಡಿದೆ.

ನೀರಿಗಿಳಿಯಲು ನಿರ್ಬಂಧ
ಸ್ನಾನ ಘಟ್ಟ ಮುಳುಗಡೆ ತೆರವುಗೊಂಡಿದ್ದರೂ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಭಕ್ತರು ನದಿಗೆ ಇಳಿಯುವುದನ್ನು ನಿರ್ಬಂಧಿಸ ಲಾಗಿದೆ. ಇಲ್ಲಿ ದೇಗುಲದ ಸಿಬಂದಿ ಹಾಗೂ ಗೃಹ ರಕ್ಷಕ ದಳದ ಸಿಬಂದಿ ನಿಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next