Advertisement

ಕುಕ್ಕೆ ಬ್ರಹ್ಮರಥ ಸ್ವಾಗತ ಪೂರ್ವಭಾವಿ ಸಭೆ

01:49 PM Sep 16, 2019 | Team Udayavani |

ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಕೋಟೇಶ್ವರದಲ್ಲಿ ಸಿದ್ದಗೊಂಡಿದ್ದು, ಬ್ರಹ್ಮರಥದ ಸ್ವಾಗತ ಪೂರ್ವಭಾವಿ ಸಭೆಯು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆಯಲ್ಲಿ ಸೋಮವಾರದಂದು ನಡೆಯಿತು.

Advertisement

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಕೋಟೇಶ್ವರದಲ್ಲಿ ಸಿದ್ದಗೊಂಡಿದ್ದು. ಸೆ.30ರಂದು ಕೋಟೇಶ್ವರದಿಂದ ರಥ ಯಾತ್ರೆಯು ಹೊರಡಲಿದೆ. ಅಕ್ಟೋಬರು 2 ರಂದು ಕುಕ್ಕೆಗೆ ಆಗಮಿಸಲಿದ್ದು ಕುಕ್ಕೆಯಲ್ಲಿ ರಥಕ್ಕೆ ಅದ್ದೂರಿ ಸ್ವಾಗತ ಕೋರಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಕಡಬದಿಂದ ವಾಹನ ಜಾಥ, ಕುಲ್ಕುಂದದಿಂದ ಪಾದಯಾತ್ರೆಯ ಜತೆಗೆ ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು.ಮಂತ್ರಘೋಷ.ಭಜನಾ ತಂಡಗಳು ಟ್ಯಾಬ್ಲೊ ಇತ್ಯಾದಿ ಸಾಂಪ್ರಾದಾಯಿಕವಾಗಿ ಸ್ವಾಗತಿಸಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಸಧಸ್ಯರು, ರಥ ದಾನಿ ಅಜಿತ್ ಶೆಟ್ಟಿ, ವಾಸ್ತುಶಿಲ್ಪಿ ಪ್ರಸಾದ ಮುನಿಯಂಗಳ,ಪೊಲೀಸ್ ಅಧಿಕಾರಿಗಳು, ಪಂಚಾಯತು ಅಧಿಕಾರಿ.ಸದಸ್ಯರು, ಸಾರ್ವಜನಿಕ ಭಕ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next