Advertisement

ಜಾಲತಾಣ ನಿರ್ವಹಣೆಗೆ ಪಾಕ್‌ನಲ್ಲಿ ಸ್ಟುಡಿಯೋ

08:17 AM May 13, 2018 | Team Udayavani |

ಜಮ್ಮು: ಜಮ್ಮು-ಕಾಶ್ಮೀರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ತಪ್ಪು ಮಾಹಿತಿ ಹರಡಲು ಪಾಕಿಸ್ಥಾನಗಳಲ್ಲಿ ವ್ಯವಸ್ಥಿತ ಸ್ಟುಡಿಯೋ ನಿರ್ಮಿಸಲಾಗಿದೆ. ಅವುಗಳನ್ನು ವ್ಯವಸ್ಥಿತವಾಗಿಯೇ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ಸಹಾಯಕ ಸಚಿವರಾಗಿರುವ ಡಾ| ಜಿತೇಂದ್ರ ಸಿಂಗ್‌ ಆರೋಪಿಸಿದ್ದಾರೆ.

Advertisement

ಪ್ರತಿ ದಿನವೂ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಮೂಲಕ ಸ್ಥಳದಿಂದ ಅವರು ಪರಾರಿಯಾಗಲು ನೆರವಾಗುವಂಥ  ಸುಳ್ಳು ಸಂದೇಶಗಳನ್ನು ನಿರ್ಮಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಕೆಲಸ ನಡೆಯುತ್ತಿದೆ. ಈ ಮೂಲಕ ಕಾಶ್ಮೀರದ ಯುವಕರ ಹಾದಿ ತಪ್ಪಿಸಲಾಗುತ್ತಿದೆ. ಗುಪ್ತಚರ ಸಂಸ್ಥೆಗಳು ಇಂಥ ಸಂದೇಶ ವ್ಯವಸ್ಥೆಯನ್ನು ಛೇದಿಸಿ ಅವುಗಳು ಸುಳ್ಳು ಎಂದು ಸಾಬೀತು ಮಾಡುತ್ತಿವೆ. ಕೇಂದ್ರ ಗೃಹ ಖಾತೆ  ಇದಕ್ಕೆ ಸೂಕ್ತ ತಿರುಗೇಟು ನೀಡಲು ಯೋಜನೆ ರೂಪಿಸುತ್ತಿದೆ ಎಂದಿದ್ದಾರೆ. 

ರಮ್ಜಾನ್‌ ಮತ್ತು ಅಮರನಾಥ ಯಾತ್ರೆ ವೇಳೆ ಕದನ ವಿರಾಮ ಘೋಷಿಸಬೇಕು ಎಂಬ ವಿಚಾರದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಎಂ ಮೆಹಬೂಬಾ ವಿರುದ್ಧ ಪರೋಕ್ಷವಾಗಿ ಸಿಂಗ್‌ ವಾಗ್ಧಾಳಿ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next