Advertisement

ಠಾಣೆಯಲ್ಲಿ ಪೊಲೀಸ್‌ ಇಲಾಖೆ ಮಾಹಿತಿ ಪಡೆದ ವಿದ್ಯಾರ್ಥಿಗಳು

12:51 PM Aug 09, 2019 | Team Udayavani |

ಕುಷ್ಟಗಿ: ಸ್ಥಳೀಯ ವಿದ್ಯಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಗಳು, ಸ್ಥಳೀಯ ಪೊಲೀಸ್‌ ಠಾಣೆ ಸಿಪಿಐ ಜಿ. ಚಂದ್ರಶೇಖರ ಹಾಗೂ ಪೊಲೀಸರನ್ನು ವಿವಿಧ ಪ್ರಶ್ನೆಗಳನ್ನು ಕೇಳಿ ಪೊಲೀಸ್‌ ಇಲಾಖೆ ಕುರಿತು ಮಾಹಿತಿ ಪಡೆದರು. ಪೊಲೀಸ್‌ ಇಲಾಖೆಯ ಸೇವೆಗಳು, ಪೊಲೀಸರು ನಿರ್ವಹಿಸುವ ಕರ್ತವ್ಯಗಳು, ದೂರು ದಾಖಲಾಗುವುದು, ಅಪರಾಧಿ ಗಳಿಗೆ ಶಿಕ್ಷೆ ಕುರಿತಾಗಿ ಮಾಹಿತಿಯನ್ನು ಪೇದೆ ಶರಣಪ್ಪ ಗುರಿಕಾರ ಅವರಿಂದ ಪಡೆದರು. ಈ ವೇಳೆ ಸಿಪಿಐ ಜಿ. ಚಂದ್ರಶೇಖರ ಮಾತನಾಡಿ, ಸಮಾಜದಲ್ಲಿ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ, ವರದಕ್ಷಿಣೆ, ದೌರ್ಜನ್ಯಗಳ ಬಗ್ಗೆ ಜಾಗೃತರಾದರೆ ಸಮಾಜ ಸುಧಾರಿಸಲು ಸಾಧ್ಯವಿದೆ. ಪೊಲೀಸರು ಎಂದರೆ ಸಾಮಾನ್ಯವಾಗಿ ಭಯ ಪಡುವುದು ಸಹಜ. ಆ ಭಯ ನಿವಾರಿಸುವ ನಿಟ್ಟಿನಲ್ಲಿ ಮಕ್ಕಳು ತಮ್ಮ ಹಕ್ಕುಗಳಿಗೆ ಚ್ಯುತಿ ಬಂದಾಗ ಮತ್ತು ರಕ್ಷಣೆ ಅವಶ್ಯವೆನಿಸಿದಾಗ ಪೊಲೀಸರ ಸಹಾಯ ಪಡೆಯಲು, ಮಕ್ಕಳ ಸ್ನೇಹಿ ವಾತಾವರಣ ಸೃಷ್ಟಿಸಲು ಈ ತೆರೆದ ಮನೆ ಪೂರಕ ಎಂದರು. ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next