Advertisement

ಬಸ್‌ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

06:37 PM Mar 12, 2021 | Nagendra Trasi |

ಚಡಚಣ: ಪಟ್ಟಣದಿಂದ ದೇವರನಿಂಬರಗಿ, ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್‌ಗಳು ನಿಯಮಿತವಾಗಿ ಸಂಚರಿಸುತ್ತಿಲ್ಲ. ಇದರಿಂದ ತೊಂದರೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಲೇಜು ವಿದ್ಯಾರ್ಥಿಗಳು, ಬಸ್‌ ನಿಲ್ದಾಣದಲ್ಲಿ ಝಳಕಿ ಮಾರ್ಗವಾಗಿ ಸಂಚರಿಸುವ ಬಸ್‌ ತಡೆದು ಪ್ರತಿಭಟನೆ ನಡೆಸಿದರು.

Advertisement

ವಿದ್ಯಾರ್ಥಿ ಆಕಾಶ ಹೊನ್ನುಂಗರೆ ಮಾತನಾಡಿ, ಚಡಚಣದಿಂದ ಇಂಚಗೇರಿ ಹಾಗೂ ಕನ್ನೂರ ಮಾರ್ಗವಾಗಿ ಸಾಯಂಕಾಲ 4.30ಕ್ಕೆ ವಿಜಯಪುರಕ್ಕೆ ತೆರಳುವ ಬಸ್‌ ಕಳೆದ 3 ದಿನಗಳಿಂದ ಬಂದಿಲ್ಲ.ಹೀಗಾಗಿ ಸುಮಾರು 50 ವಿದ್ಯಾರ್ಥಿಗಳು ರಾತ್ರಿ 7 ಗಂಟೆಗೆ ತೆರಳುತ್ತಿದ್ದಾರೆ. ಈ ಬಗ್ಗೆ ಸಾರಿಗೆ ನಿಯಂತ್ರಕರನ್ನು ಕೇಳಿದರೆ ಬಸ್‌ ಬಂದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ನಿಯಂತ್ರಣಾಧಿಕಾರಿ ಶ್ರೀಧರ ಕಟ್ಟಿಮನಿ ಮಾತನಾಡಿ, ಝಳಕಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುವ ಬಸ್‌ನ್ನು ಇಂಚಗೇರಿ   ಹಾಗೂ ಕನ್ನೂರ ಮಾರ್ಗವಾಗಿ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ವೇಳೆ ಎಬಿವಿಪಿ ಕಾರ್ಯದರ್ಶಿ ಚೇತನ ನಿರಾಳೆ, ಕಾರ್ಯಕರ್ತರಾದ ಅನೀಲ ಹಿರೇಮಠ, ಪರಶುರಾಮ ಖೇಡಗಿ, ಸಂತೋಷ ಅವಟಿ, ಶಿವಾನಂದ ಮಾಳಿ, ಅರ್ಬಜ ವಾಲಿಕಾರ ಸೇರಿದಂತೆ ವಿದ್ಯರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next