Advertisement

“ಮಕ್ಕಳ ನಡೆ ಅರಣ್ಯದ ಕಡೆ’ಕಾರ್ಯಕ್ರಮ

02:51 PM Mar 27, 2021 | Team Udayavani |

ತಿಪಟೂರು: ತಾಲೂಕಿನ ನೊಣವಿನಕೆರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರೌಢಶಾಲಾ ವಿಭಾಗದ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಮಕ್ಕಳ ನಡೆ ಅರಣ್ಯದ ಕಡೆ ಎಂಬ ವಿನೂತನ ಪರಿಸರ ಪಯಣ ಕಾರ್ಯಕ್ರಮ ನಡೆಯಿತು.

Advertisement

ಶಾಲೆಯ ಇಕೋ ಕ್ಲಬ್‌ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಾಗೂ ನೊಣವಿನಕೆರೆಲಯನ್ಸ್‌ ಕ್ಲಬ್‌ನ ಸಹಕಾರದೊಂದಿಗೆಸುಮಾರು 60 ವಿದ್ಯಾರ್ಥಿಗಳು, ಶಿಕ್ಷಕವೃಂದ, ಪರಿಸರ ಪ್ರೇಮಿ, ಪರಿಸರ ಚಿಂತಕಗುಂಗರಮಳೆ ಮುರಳೀಧರ್‌ರ ಮಾರ್ಗದರ್ಶನದಲ್ಲಿ ನಡೆಯಿತು. ಮಕ್ಕಳನ್ನು ಸಮೀಪದ ರಂಗನಹಳ್ಳಿಯ ಅರಣ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅರಣ್ಯದ ದಾರಿಯಲ್ಲಿ ಸಿಗುವ ಸಸ್ಯ, ಗಿಡ, ಮರ ಮತ್ತು ವಿವಿಧ ಸಸ್ಯ ಪ್ರಬೇಧ ಮತ್ತು ಔಷಧೀಯ ಸಸ್ಯಗಳಪ್ರಪಂಚವನ್ನು ಮಕ್ಕಳ ಮುಂದೆ ತೆರೆದಿಡಲಾಯಿತು.

ವಿಶೇಷವಾಗಿ ಸಿಳ್ಳೆ ಹೊಡೆಯುವ ಕಾಯಿ, ನಿಸರ್ಗದ ಪಾನೀಯ ಗುಲಗಂಜಿ ಸಸ್ಯದ ಎಲೆ ತಿನ್ನುತ್ತಾ ವಿವಿಧ ಎಲೆ,ಕಾಯಿ, ಗಿಡಗಳ ಉಪಯೋಗಗಳನ್ನುತಿಳಿದುಕೊಂಡರು. ಜೀವ ವೈವಿಧ್ಯತೆಗಳಕುತೂಹಲ ತಿಳಿದುಕೊಂಡು ಪ್ರಕೃತಿಮಡಿಲಲ್ಲಿ ಕಾರ್ಯಕ್ರಮ ಆಚರಿಸಿದ್ದುವಿಶೇಷವಾಗಿತ್ತು.

ಈ ವೇಳೆ ಶಾಲೆಯ ಹಿರಿಯ ಸಹ ಶಿಕ್ಷಕಿ ಕೆ.ಎಂ.ರುಕ್ಮಿಣಿ,ಇಕೋ ಕ್ಲಬ್‌ ಸಂಚಾಲಕ, ಎನ್‌ಎಸ್‌ ಎಸ್‌ ಕಾರ್ಯಕ್ರಮಾಧಿಕಾರಿ ಸ.ಚ. ಜಗದೀಶ್‌, ಐ.ಟಿ. ಸಂಪನ್ಮೂಲ ಶಿಕ್ಷಕ ಯಾದವ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next