Advertisement

ವಿದ್ಯಾರ್ಥಿನಿಯರ ಅಪಹರಣ ; ಆರೋಪಿಯೊಬ್ಬನ ಬಂಧನ

11:46 AM Feb 21, 2017 | Harsha Rao |

ಮಂಗಳೂರು: ನಗರದ ಕದ್ರಿ ವ್ಯಾಪ್ತಿಯಿಂದ ಫೆ. 11ರಂದು 17ರ ಹರೆಯದ ಇಬ್ಬರು ವಿದ್ಯಾರ್ಥಿನಿಯರು ಕಾಣೆಯಾಗಿದ್ದ ಪ್ರಕರಣವನ್ನು ಅಪಹರಣ ಪ್ರಕರಣವಾಗಿ ದಾಖಲಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಪುತ್ತೂರಿನ ಶಂಕರ್‌ ಭಟ್‌ (33) ಅವರನ್ನು ಬಂಧಿಸಿದ್ದಾರೆ. 

Advertisement

ಟ್ಯುಟೋರಿಯಲ್‌ ಸಂಸ್ಥೆಯೊಂದರಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈ ವಿದ್ಯಾರ್ಥಿನಿಯರು ದಿಢೀರ್‌ ಕಾಣೆಯಾಗಿದ್ದ ಬಗ್ಗೆ ಕದ್ರಿ ಪೊಲೀಸ್‌ ಠಾಣೆಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅಪಹರಣಕ್ಕೊಳಗಾಗಿದ್ದ ವಿದ್ಯಾರ್ಥಿನಿಯರಿಬ್ಬರು ಮಡಿಕೇರಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಕದ್ರಿ ಪೊಲೀಸರು ಮಂಗಳೂರಿಗೆ ಕರೆ ತಂದು ಹೆತ್ತವರಿಗೆ ಒಪ್ಪಿಸಿದ್ದರು.

ಮನೆಯಲ್ಲಿ ತಮಗೆ ನಿಂದಿಸಿದ ಕಾರಣ ತಾವು ಹೋಗಿದ್ದೆವು. ಮಡಿಕೇರಿ ಯಲ್ಲಿ ಕೆಲಸ ಹುಡುಕಿಕೊಂಡು ಫ್ಯಾನ್ಸಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆವು ಎಂದು ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದರು.  

ಆದರೆ ಈ ವಿದ್ಯಾರ್ಥಿನಿಯರು ಅಪ್ರಾಪ್ತ ವಯಸ್ಕರಾಗಿದ್ದುದರಿಂದ ಅವರನ್ನು ಅಂಗಡಿಯಲ್ಲಿ ಕೆಲಸಕ್ಕಿಟ್ಟುಕೊಂಡ ಆರೋಪದ ಮೇಲೆ ಶಂಕರ ಭಟ್‌ ಅವರನ್ನು ಪೋಕೊÕ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಸ್ತುತ, ಈ ಪ್ರಕರಣವನ್ನು ಮಹಿಳಾ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದ್ದು, ಇನ್ನಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next