Advertisement

ಕೂರಾಡಿ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

11:56 PM Feb 08, 2019 | Team Udayavani |

 ಬ್ರಹ್ಮಾವರ: ಹನೆಹಳ್ಳಿ ಗ್ರಾಮದ ಕೂರಾಡಿ ವಿದ್ಯಾರ್ಥಿ ನಿಲಯದ  ವಿದ್ಯಾರ್ಥಿ, ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕು ಅಡವಿಬಾವಿ ಗ್ರಾಮದ ಮಲ್ಲೇಶ(17) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮತ್ತೋರ್ವ ವಿದ್ಯಾರ್ಥಿ ಬಿಜಾಪುರ ಮೂಲದ ಮಹೇಶ (17) ನಾಪತ್ತೆಯಾದ   ಘಟನೆ ಗುರುವಾರ ಸಂಭವಿಸಿದೆ.

Advertisement

ಪ್ರಕರಣದ ವಿವರ

ಮಲ್ಲೇಶ ಮತ್ತು ಮಹೇಶ ಗುರುವಾರ ಬೆಳಗ್ಗೆ ಹಾಸ್ಟೆಲ್‌ ತೊರೆದು ಹೋಗುವ ಯೋಜನೆ ಹಾಕಿದ್ದರು ಎನ್ನಲಾಗಿದೆ. ಮಲ್ಲೇಶನು ಕಾಲಿನ ಕಜ್ಜಿಗೆ ಔಷಧ ತರಲು ಹೋಗಲಿಕ್ಕಿದೆ ಹಾಸ್ಟೆಲ್‌ ಮುಖ್ಯಸ್ಥರಲ್ಲಿ ಹೇಳಿದ್ದಾನೆ. ಆದರೆ ಮುಖ್ಯಸ್ಥರು ಓರ್ವನನ್ನು ಕಳುಹಿಸಿಕೊಡದೆ ಬೇರೆಯವರ ಜತೆ ಕಳುಹಿಸಿದರು. 
ಈ ನಡುವೆ ಮಹೇಶ ಶಾಲಾ ಬ್ಯಾಗನ್ನು ಹಾಸ್ಟೆಲ್‌ ಸಮೀಪ ಎಸೆದು ಪರಾರಿಯಾಗಿದ್ದಾನೆ.

ಪರಾರಿಯಾಗಲು ವಿಫಲನಾದ ಹಿನ್ನೆಲೆಯಲ್ಲಿ ಮಲ್ಲೇಶನು ಗುರು ವಾರ ಸಂಜೆ ಹಾಸ್ಟೆಲ್‌ ಸಮೀಪದ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಗುರುವಾರ ರಾತ್ರಿ ವಿಶೇಷ ತರಗತಿ ನಡೆಯುವಾಗ ಶಿಕ್ಷಕರು ಮಲ್ಲೇಶ ಗೈರಾಗಿ ರು ವು ದ ನ್ನು ಗಮನಿಸಿ ಹುಡು ಕಾಡಿದಾಗ ವಿಚಾರ ತಿಳಿದು ಬಂದಿದೆ. ಇಬ್ಬರೂ ಕೂರಾಡಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.

ಕಲಿಕೆಯಲ್ಲಿ ಸ್ವಲ್ಪ ಹಿಂದುಳಿದ ಕಾರಣ ಮುಂಬರುವ ಎಸೆಸೆಲ್ಸಿ ಪರೀಕ್ಷೆ ಎದುರಿಸುವ ಭಯದಿಂದ ಇಬ್ಬರೂ ಪರಾರಿಯಾಗುವ ಯೋಜನೆ ಹಾಕಿದ್ದರು ಎನ್ನಲಾಗಿದೆ.
ಬ್ರಹ್ಮಾವರ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next