Advertisement
ಥಾಣೆ ಎಚ್ಎಸ್ಪಿ ಪೊಲೀಸ್ ಅಧೀಕ್ಷಕ ದಿಗಂಬರ್ ಪ್ರಧಾನ್ ಅವರು ಇತ್ತೀಚೆಗೆ ಹೊರಡಿಸಿದ ಆದೇಶದ ಪ್ರಕಾರ, ವೇಗದ ಮಿತಿಯನ್ನು ಪಾಲಿಸದ ವಾಹನ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದು, ದಂಡ ವಿಧಿಸಲಿದ್ದಾರೆ. ಶೇ. 30ರಷ್ಟು ರಸ್ತೆ ಅಪಘಾತಗಳು ವೇಗದ ಚಾಲನೆಯಿಂದಾಗಿ ಸಂಭವಿಸುತ್ತಿವೆ ಎಂಬ ಅಂಶವು ಬಹಿರಂಗವಾದ ಅನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ದಾಖಲಾದ ವೇಗದ ಉಲ್ಲಂಘನೆಗಳ ವಿರುದ್ಧ ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಇತರ ಪ್ರಮುಖ ರಸ್ತೆಗಳಿಗೆ ಪೊಲೀಸರು ಪ್ರತ್ಯೇಕ ವೇಗ ಮಿತಿಗಳನ್ನು ರೂಪಿಸಿದ್ದರು. ಈ ಹೊಸ ಪರಿಷ್ಕೃತ ವೇಗ ಮಿತಿಗಳನ್ನು ಕಳೆದ ವರ್ಷದ ಅ. 25ರಿಂದ ಜಾರಿಗೆ ತರಲಾಗಿದ್ದರೂ, ವಾಹನ ಚಾಲಕರು ಅವುಗಳನ್ನು ಅನುಸರಿಸುತ್ತಿಲ್ಲ. ನಿಯಮಗಳನ್ನು ಉಲ್ಲಂ ಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಹೆಚ್ಚಿಸಲು ಪೊಲೀಸರು ಇನ್ನುಮುಂದೆ ಟೋಲ್ ನಾಕಾದಲ್ಲಿ ಅಳವಡಿಸಲಾದ ವಿವಿಧ ಸಿಸಿಟಿವಿ ಕೆಮೆರಾಗಳು ಮತ್ತು ಇತರ ಸಂಚಾರ ಸಂಕೇತಗಳ ಸಹಾಯ ಪಡೆದುಕೊಳ್ಳಲಿದ್ದಾರೆ ಎಂದು ಪ್ರಧಾನ್ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
Advertisement
ವೇಗದ ವಾಹನ ಚಾಲನೆ ವಿರುದ ಕಠಿನ ಕ್ರಮ: ರಾಜ್ಯ ಪೊಲೀಸ್
12:29 PM Jun 24, 2020 | Suhan S |
Advertisement
Udayavani is now on Telegram. Click here to join our channel and stay updated with the latest news.