Advertisement

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

01:00 PM May 04, 2024 | Nagendra Trasi |

ಅಬುಧಾಬಿ: ಶಾರ್ಜಾ ಅಜ್ಮಾನ್‌ ಭಾಗದಲ್ಲಿ ಮಳೆ ಪ್ರವಾಹದಿಂದ ಕಳೆದ ಎಂಟು ದಿನಗಳಿಂದ ಮನೆಯಿಂದ ಹೊರಬರಲಾಗದೆ ಸಂಕಷ್ಟದಲ್ಲಿದ್ದ ಭಾರತೀಯರು ಮತ್ತು ಇತರ ವಿದೇಶಿಯರಿಗೆ ಆಹಾರ ಪದಾರ್ಥ, ನೀರು ಮತ್ತು ಇನ್ನಿತರ ಆವಶ್ಯಕ ವಸ್ತುಗಳನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದಿಂದ ತಲುಪಿಸಲಾಯಿತು.

Advertisement

ಇದನ್ನೂ ಓದಿ:MIvsKKR; ಹಲವು ಪ್ರಶ್ನೆಗಳಿವೆ, ಆದರೆ…: ಎಂಟನೇ ಸೋಲಿನ ಬಳಿಕ ಹಾರ್ದಿಕ್ ಪಾಂಡ್ಯ ಹೇಳಿದ್ದೇನು?

ಸಹಾಯ ಹಸ್ತ ವಿಭಾಗದ ರಫೀಕಲಿ ಕೊಡಗು, ಹಾದಿಯ ಮಂಡ್ಯ, ಪ್ರತಾಪ್‌ ಮಡಿಕೇರಿ, ಸಂತೋಷ್‌ ಶಿವಮೊಗ್ಗ, ಅರ್ಪಿತಾ ಬೆಂಗಳೂರು, ಅಯ್ಯುಬ್‌ ಶಿವಮೊಗ್ಗ, ನಝೀರ ಮಂಡ್ಯ, ಮತ್ತು ಅಬ್ರಾರ್‌ ಅವರು ಸೇರಿ ಗಾಡಿಗಳು ಹೋಗದ ಸ್ಥಳಗಳಿಗೆ ದೋಣಿ ಬಳಸಿ ಊಟದ ಪದಾರ್ಥಗಳನ್ನು ಮತ್ತು ಆವಶ್ಯಕ ವಸ್ತುಗಳನ್ನು ಬೆಳಗ್ಗೆಯಿಂದ ರಾತ್ರಿ ತನಕ ನೂರಾರು ಸಂಕಷ್ಟದಲ್ಲಿರುವ ಜನರಿಗೆ ತಲುಪಿಸಿದರು.

ದುಬೈಯಲ್ಲಿರುವ ಎಂಬಿಎಮ್‌ ಕ್ಲಿನಿಕ್‌ ಜತೆ ಸೇರಿ ಉಚಿತ ಅರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಔಷಧವನ್ನು ತಲುಪಿಸುವಲ್ಲಿ ತಂಡ ನಿರ್ಣಾಯಕ ಪಾತ್ರವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next