Advertisement

“ಆಯುಷ್ಮಾನ್‌’ದುರ್ಬಳಕೆ ವಿರುದ್ಧ ಕಠಿನ ಕ್ರಮ: ಪಿಎಂ

12:28 AM Oct 02, 2019 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್‌ ಭಾರತ ಯೋಜನೆಯು ಯಾವುದೇ ಕಾರಣಕ್ಕೂ ದುರ್ಬಳಕೆಯಾಗದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊ ಳಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಯೋಜನೆ ಜಾರಿಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, “”ಆಯುಷ್ಮಾನ್‌ ಭಾರತ ಯೋಜನೆಯು ಯಶಸ್ವಿ ಯಾಗಿರುವುದು ಖುಷಿ ತಂದಿದೆ.

Advertisement

ಬಡವರು ತಮ್ಮ ಕಾಯಿಲೆಗಳಿಗೆ ಹಾಗೂ ಇನ್ನಿತರ ಅನಾರೋಗ್ಯಗಳ ಚಿಕಿತ್ಸೆಗಾಗಿ ತಮ್ಮ ಭೂಮಿ, ಒಡವೆಗಳನ್ನು ಅಡ ಇಡುವ ಸನ್ನಿವೇಶ ದೂರಾಗಿದೆ. ಅವರೆಲ್ಲರೂ ಉಚಿತವಾಗಿ ಚಿಕಿತ್ಸೆ ಪಡೆಯುವಂತಾಗಿದೆ. ಇದು ನಿಜಕ್ಕೂ ಸಂತೋಷದ ವಿಚಾರ” ಎಂದರು. ಜತೆಗೆ, ಆಯುಷ್ಮಾನ್‌ ಭಾರತದ ಜನಪ್ರಿಯತೆ ದಿನೇ ದಿನೆ ಹೆಚ್ಚುತ್ತಿರುವುದರಿಂದ ಅದನ್ನು ಹೆಚ್ಚೆಚ್ಚು ವಿಸ್ತಾರವಾಗಿಸಲು ಕ್ರಮ ಕೈಗೊಳ್ಳಲಾಗುವುದು. ಅದರಿಂದ, 11 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next