Advertisement

ಗುಡಿಬಂಡೆಯಲ್ಲಿ ಟಫ್ ರೂಲ್ಸ್ : ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಪೊಲೀಸರು, ವಾಹನಗಳ ಜಪ್ತಿ

07:10 AM May 10, 2021 | Team Udayavani |

ಗುಡಿಬಂಡೆ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಮಾದರಿ ಟಫ್ ರೂಲ್ಸ್ ಜಾರಿಯಾಗಿದ್ದು, ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಅನಗತ್ಯವಾಗಿ ಓಡಾಡುತ್ತಿದ್ದ 10ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಕೋವಿಡ್ ತನ್ನ ಆರ್ಭಟವನ್ನು ಮುಂದುವರೆಸುತ್ತಿರುವುದರಿಂದ, ಸರ್ಕಾರದ ಆದೇಶದಂತೆ ಎರಡನೇ ಬಾರಿಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಿದ್ದು, ಅದರಂತೆ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಪೊಲೀಸರು, ಜನರ ಓಡಾಟಕ್ಕೆ ಬ್ರೇಕ್ ಹಾಕಿದ್ರು.

ಇನ್ನು ಸರ್ಕಾರದ ನೂತನ ನಿಯಮಗಳಿಂದ ರೈತರಿಗೆ ಸಂಕಷ್ಟ ಎದುರಾಗಿದ್ದು,ಜಾನವಾರುಗಳಿಗೆ ಮೇವು ತರಲು ಕಷ್ಟವಾಗಿದೆ. ಸುಮಾರು 2 – 3 ಕಿ.ಮೀ ದೂರದಲ್ಲಿರುವ ಜಮೀನುಗಳಿಂದ ಮೇವು ಹೊತ್ತಿಕೊಂಡು ಬರಲು ಸಾಧ್ಯವೇ, ಜಾನವಾರುಗಳ ಪರಿಸ್ಥಿತಿ ಹೇಗೆ ಎಂದು ಆಕ್ರೋಶಭರಿತ ನೋವಿನಿಂದ ರೈತರು ಪ್ರಶ್ನಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next