Advertisement

ಬೀದಿ ಬದಿ ವ್ಯಾಪಾರ ಬಂದ್‌: ಇಂದು ನಿರ್ಧಾರ

02:44 PM May 10, 2021 | Team Udayavani |

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿಬೀದಿ ಬದಿ ವ್ಯಾಪಾರವನ್ನು ಮುಂದುವರಿಸಬೇಕೆ ಇಲ್ಲವೆ ಬಂದ್‌ ಮಾಡಬೇಕೆ?ಎಂಬುವುದರ ಬಗ್ಗೆ ಸೋಮವಾರನಿರ್ಣಯ ತೆಗೆದುಕೊಳ್ಳುವುದಾಗಿ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದರಾಜ್ಯಾಧ್ಯಕ್ಷ ರಂಗಸ್ವಾಮಿ ಹೇಳಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,ಸರ್ಕಾರದ ನಿಯಮಗಳು ಇನ್ನೂಗೊಂದಲ ವನ್ನು ಮೂಡಿಸಿವೆ.ಬೆಂಗಳೂರಿನಿಂದ ಹೊರಗಿರುವ ತರಕಾರಿಮಾರುಕಟ್ಟೆ ಹೋಗಿ ತರಕಾರಿ ತಂದುಅವುಗಳನ್ನು ಮಾರಾಟಕ್ಕೆ ಇಳಿಯುವುದರಒಳಗೆ ಸರ್ಕಾರ ನೀಡಿರುವ ಗಡುವುಮುಗಿಯಲಿದೆ.ಆ ಹಿನ್ನಲೆಯಲ್ಲಿಸಾಮಾಜಿಕ ಜಾಲತಾಣದ ಮೂಲಕಸಭೆ ನಡೆಸಿ ಅಂತಿಮ ತೀರ್ಮಾನಕ್ಕೆಬರುವುದಾಗಿ ತಿಳಿಸಿದ್ದಾರೆ.

ಕೋವಿಡ್‌ ದಿನೇ ದಿನೆಹೆಚ್ಚಳವಾಗುತ್ತಿದೆ. ಅಪಾಯ ಮೈಮೇಲೆಎಳೆದುಕೊಂಡು ವ್ಯಾಪಾರ ಮಾಡುವಪರಿಸ್ಥಿತಿ ಬಂದೊದಗಿದೆ. ಆ ಹಿನ್ನೆಲೆಯಲ್ಲಿಕೆಲವರು ಸಂಪೂರ್ಣ ಬಂದ್‌ಮಾಡೋಣ ಎಂದು ಹೇಳಿದರೆ ಇನ್ನೂಕೆಲವರು ಬೇಡ ಅನ್ನುತ್ತಿದ್ದಾರೆ. ಇದಕ್ಕೆಸೋಮವಾರ ಸ್ಪಷ್ಟ ಉತ್ತರ ಸಿಗಲಿದೆಎಂದು ಹೇಳಿದ್ದಾರೆ.ಕೋವಿಡ್‌ ಸೋಂಕಿನ ಬಗ್ಗೆಮುನ್ನೆಚ್ಚರಿಕೆ ವಹಿಸಬೇಕಾಗಿದೆ.ಈ ಬಗ್ಗೆಸಂಘಟನೆಯ ಸದ್ಯರಿಗೂ ಜೀವನಕ್ಕಿಂತಲೂ ಜೀವ ಮುಖ್ಯಎಂಬುವುದನ್ನು ತಿಳಿಹೇಳ ಬೇಕಾಗಿದೆಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next