Advertisement

ಬೆಂಗಳೂರು ಉತ್ತರ: ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ

09:49 AM Jun 26, 2019 | Team Udayavani |

ಬೆಂಗಳೂರು: ಉತ್ತರ ತಾಲೂಕಿನ ಅಜ್ಜೇಗೌಡನ ಪಾಳ್ಯ ದಲ್ಲಿ ಬೀದಿ ನಾಯಿಗಳ ದಾಳಿಗೆ ಸಿಲುಕಿ 5 ವರ್ಷದ ಬಾಲಕನೊಬ್ಬ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಸೋಮವಾರ ಸಂಜೆ ನಡೆದಿದೆ.

Advertisement

ದುರ್ಗೇಶ್‌ ಎನ್ನುವ ಬಾಲಕ ಮೃತ ದುರ್ದೈವಿಯಾಗಿದ್ದು,
ಕಲಬುರಗಿಯ ಸೇಡಂನ ಮಲ್ಲಪ್ಪ ಎನ್ನುವವರ ಪುತ್ರ ಎಂದು ತಿಳಿದು ಬಂದಿದೆ.

ಕೂಲಿ ಕಾರ್ಮಿಕರಾಗಿದ್ದ ತಂದೆ ಬಳಿ ತೆರಳಿದ್ದ ಬಾಲಕ ಒಬ್ಬನೆ ಅಂಗಡಿಗೆ ತೆರಳಿ ಚಾಕಲೇಟ್‌ ತಿಂದು ಹೋಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ 15 ಕ್ಕೂ ಹೆಚ್ಚು ಬೀದಿ ನಾಯಿಗಳು ಎರಗಿ ಕಚ್ಚಿ ಸಾಯಿಸಿವೆ. ಗುರುತು ಸಿಗದಷ್ಟರ ಮಟ್ಟಿಗೆ ನಾಯಿಗಳು ದಾಳಿ ನಡೆಸಿದ್ದವು.

ಸೋಲದೇವನಹಳ್ಳಿ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next