Advertisement

ಬರಗೂರು: ಬೀದಿನಾಯಿಗಳ ದಾಳಿಗೆ 2 ಕುರಿಗಳು ಸಾವು

04:21 PM Jan 20, 2021 | Team Udayavani |

ಬರಗೂರು: ಕೆರೆಯಲ್ಲಿ ಕುರಿ ಮೇಯಿಸುವಾಗ ಬೀದಿ ನಾಯಿಗಳ ಹಾವಳಿಗೆ ಎರಡು ಕುರಿಗಳು ಸಾವಿಗೀಡಗಿರುವ ಘಟನೆ ಶಿರಾ ತಾಲೂಕು ಹುಲಿಕುಂಟೆ ಹೋಬಳಿಯ ಕದಿರೇಹಳ್ಳಿ ಗ್ರಾಮದ ಕರೆಯಲ್ಲಿ ಮಂಗಳವಾರ ಮದ್ಯಾಹ್ನ ಸುಮಾರು ಒಂದು ಗಂಟೆ
ಸಮಯದಲ್ಲಿ ನಡೆದಿದೆ.

Advertisement

ಶಿರಾ ತಾಲೂಕು ಹುಲಿಕುಂಟೆ ಹೋಬಳಿ ಬರಗೂರು ಗ್ರಾಪಂ ವ್ಯಾಪ್ತಿಯ ಕದಿರೇಹಳ್ಳಿ ಗ್ರಾಮದ ಗೊಲ್ಲರ ಹಟ್ಟಿಯ ಮುಕುಂದಪ್ಪ ಎಂಬುವರು ಗ್ರಾಮದ ಕೆರೆಯಲ್ಲಿ ಕುರಿ ಮೇಯಿಸಲು ಹೋದಾಗ ಬೀದಿ ನಾಯಿಗಳು ಎರಡು ಕುರಿಗಳನ್ನು ಕಚ್ಚಿದ ಪರಿಣಾಮ
ಕುರಿಗಳು ಸಾವನ್ನಪ್ಪಿವೆ. ಒಬ್ಬರೇ ಕುರಿಗಾಹಿ ನಾಯಿಗಳನ್ನು ಹೋಡಿಸಲು ಎಷ್ಟೇ ಪ್ರಯತ್ನ ಮಾಡಿದರೂ ಪ್ರಯತ್ನ ವಿಫ‌ಲವಾಗಿದೆ. ಈಗಾಗಲೇ ಒಂದು ವಾರದಿಂದಲೂ ಮುಕುಂದಪ್ಪ ಎಂಬುವರ ಸುಮಾರು 10ಕ್ಕೂ ಹೆಚ್ಚು ಕುರಿಗಳು ನಾಯಿಕಚ್ಚಿ
ಸಾವನ್ನಪ್ಪಿರುವುದಾಗಿ ಕುರಿಗಾಹಿ ಮುಕುಂದಪ್ಪ ಅಳಲು ತೋಡಿಕೊಂಡಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಹೆದ್ದಾರಿ ಕಾಮಗಾರಿಗೆ ಕಲ್ಲುಸ್ಫೋಟ : ರಸ್ತೆ ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು, ಆಕ್ರೋಶ

ಇದಷ್ಟೇ ಅಲ್ಲದೆ ಕದಿರೇಹಳ್ಳಿ ಗ್ರಾಮದ ಗೋವಿಂದರಾಜು, ಜುಂಜಣ್ಣ, ಕೆಂಪಣ್ಣರವರಿಗೆ ಸೇರಿದ ಸುಮಾರು 10ಕ್ಕೂ ಹೆಚ್ಚು ಕುರಿಗಳು ನಾಯಿಗಳು ಕಚ್ಚಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಕೆರೆಯಲ್ಲಿ ಕುರಿ,ಕೋಳಿ ಮಾಂಸದ ಕಸವನ್ನು
ಎಸೆಯುತ್ತಿರುವುದರಿಂದ ನಾಯಿಗಳು ಮಾಂಸದ ರುಚಿಕಂಡು ಕುರಿಗಳನ್ನು ಕಚ್ಚಿ ತಿನ್ನಲು ಪ್ರಯತ್ನಿಸುತ್ತಿವೆ ಎಂದು ಕುರಿಗಾಹಿಗಳು ಅಲವತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next