Advertisement

Kasaragod ಅಂಗಳದಲ್ಲಿ ಆಡುತ್ತಿದ್ದ ಮಗುವನ್ನು ಎಳೆದೊಯ್ದ ಬೀದಿನಾಯಿಗಳು!

11:20 PM Jan 17, 2024 | Team Udayavani |

ಕಾಸರಗೋಡು: ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಎಳೆದುಕೊಂಡು ಹೋದ ಘಟನೆ ಪಡನ್ನದಲ್ಲಿ ನಡೆದಿದೆ.

Advertisement

ಪಡನ್ನ ವಡಕ್ಕೇಪುರತ್ತ್ ಮಣ್ಣಾತಿಗೆ ಸಮೀಪದ ಫಾಬಿನಾ – ಸುಲೈಮಾನ್‌ ದಂಪತಿ ಪುತ್ರ ಬಶೀರ್‌ (1.5) ಮನೆ ಅಂಗಳದಲ್ಲಿ ಆಡುತ್ತಿದ್ದಾಗ ನಾಯಿಗಳು ಎಳೆದುಕೊಂಡು ಹೋಗಿವೆ. ಮಗುವಿನ ಅಳು ಆಲಿಸಿದ ಮನೆಯವರು ಓಡಿ ಬಂದಾಗ ನಾಯಿಗಳು ಪರಾರಿಯಾಗಿವೆ.

ಮಗುವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದೇ ಪ್ರದೇಶದಲ್ಲಿ ಬೀದಿನಾಯಿಗಳು ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next