Advertisement

ಹಾಸ್ಟೆಲ್‌ನಲ್ಲಿ ಅಕ್ರಮವಾಸ ತಪ್ಪಿಸಲು ಕಾರ್ಯತಂತ್ರ

03:06 PM Mar 31, 2021 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಜ್ಞಾನಭಾರತಿ ಕ್ಯಾಂಪಸ್‌ನ ವಿದ್ಯಾರ್ಥಿನಿಯಲಯಗಳಿಗೆ ಹಂತ ಹಂತವಾಗಿ ವಿಶೇಷ ಭದ್ರತೆಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸುವಮೂಲಕ ಅಕ್ರಮವಾಗಿ ನೆಲೆಸಿರುವವರನ್ನುಹೊರಹಾಕಲು ಆಡಳಿತ ಮಂಡಳಿಯ ಕಾರ್ಯತಂತ್ರರೂಪಿಸಿದೆ.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದಎರಡು ಹಾಸ್ಟೆಲ್‌ಗ‌ಳು ನಡೆಯುತ್ತಿದ್ದು, ಆ ಎರಡುಹಾಸ್ಟೆಲ್‌ಗ‌ಳ ಉಸ್ತುವಾರಿಯನ್ನು ಇಲಾಖೆಯೇನೋಡಿಕೊಳ್ಳುತ್ತಿದೆ. ಉಳಿದಂತೆ ವಿಶ್ವವಿದ್ಯಾಲಯದಿಂದ2 ಮಹಿಳಾ ಹಾಸ್ಟೆಲ್‌, ಪಿ.ಎಚ್‌ಡಿ ಅಧ್ಯಯನಮಾಡುವವರಿಗಾಗಿ ಇರುವ ಒಂದು ಹಾಸ್ಟೆಲ್‌,ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ಹಾಸ್ಟೆಲ್‌,ದೈಹಿಕ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗೆ ಒಂದುಹಾಸ್ಟೆಲ್‌ ಹಾಗೂ ಈಶಾನ್ಯ ರಾಜ್ಯದವಿದ್ಯಾರ್ಥಿಗಳಿಗಾಗಿ ನೂತನ ಹಾಸ್ಟೆಲ್‌ನಿರ್ಮಾಣವಾಗಿದೆ.

ಒಟ್ಟಾರೆಯಾಗಿ ಜ್ಞಾನಭಾರತಿ ಆವರಣದಲ್ಲಿ 8ಹಾಸ್ಟೆಲ್‌ಗ‌ಳಿದ್ದು, 3 ಸಾವಿರ ವಿದ್ಯಾರ್ಥಿಗಳು ಇದರಅನುಕೂಲ ಪಡೆಯುತ್ತಿದ್ದಾರೆ. ಹಾಗೆಯೇವಿದ್ಯಾರ್ಥಿಗಳ ಹೆಸರಿನಲ್ಲಿ ಹಾಸ್ಟೆಲ್‌ ಸೌಲಭ್ಯವನ್ನುದುರುಪಯೋಗ ಮಾಡಿಕೊಳ್ಳುತ್ತಿರುವವರಸಂಖ್ಯೆಯೂ ನೂರಕ್ಕೂ ಹೆಚ್ಚಿದೆ ಎಂದುವಿಶ್ವವಿದ್ಯಾಲಯದ ಉನ್ನತ ಮೂಲ ತಿಳಿಸಿದೆ.

ಅಕ್ರಮ ವಾಸ ತಪ್ಪಿಸಲು ಕ್ರಮ: ಬೆಂವಿವಿ ಹಾಸ್ಟೆಲ್‌ಗಳಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನುಹೊರಹಾಕಲು ಅನೇಕ ಕುಲಪತಿಗಳು ಪ್ರಯತ್ನಮಾಡಿದ್ದರು. ಆದರೆ, ಯಾರಿಂದಲೂ ಶೇ.100ರಷ್ಟುಫ‌ಲಿತಾಂಶ ಪಡೆಯಲು ಸಾಧ್ಯವಾಗಿಲ್ಲ. ಒಂದಲ್ಲಒಂದು ವಾಮ ಮಾರ್ಗದ ಮೂಲಕ ಅಕ್ರಮವಾಗಿಹಾಸ್ಟೆಲ್‌ ಸೇರಿಕೊಳ್ಳುವವರ ಸಂಖ್ಯೆ ಇದ್ದೇ ಇರುತ್ತದೆ.ಸಂಶೋಧನೆ, ವಿಶೇಷ ಅಧ್ಯಯನ ಹೀಗೆ ನಾನಾಕಾರಣ ನೀಡಿ ಅಕ್ರಮವಾಗಿ ನೆಲೆಸಿರುತ್ತಾರೆ.

ಇದನ್ನುತಪ್ಪಿಸುವ ನಿಟ್ಟಿನಲ್ಲಿ ಬೆಂವಿವಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಮುಂದಾಗಿದೆ.ಈಗಾಗಲೇ ಹಾಸ್ಟೆಲ್‌ ಸುರಕ್ಷತೆ ದೃಷ್ಟಿಯಿಂದಕಾಂಪೌಂಡ್‌ ವಾಲ್‌ಗ‌ಳನ್ನು ನಿರ್ಮಿಸಿ, ಅದರ ಮೇಲೆಮೆಸ್‌ ಅಳವಡಿಸಲಾಗಿದೆ. ಹಾಗೆಯೇ ಎಲ್ಲ ಪಿಜಿಹಾಸ್ಟೆಲ್‌ಗ‌ಳಿಗೂ ಒಂದೇ ಗೇಟ್‌ ರಚಿಸಿ, ಭದ್ರತಾಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

Advertisement

ಸಿಸಿಕ್ಯಾಮರಾಗಳನ್ನು ಕೆಲವೊಂದು ಹಾಸ್ಟೆಲ್‌ನಲ್ಲಿಅಳವಡಿಸಲಾಗಿದ್ದು, ಇನ್ನು ಕೆಲವು ಹಾಸ್ಟೆಲ್‌ನಲ್ಲಿಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದುಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಆ್ಯಕ್ಷೆಸ್‌ ಕಾರ್ಡ್‌ ಪರಿಚಯಿಸಲು ಚಿಂತನೆ: ಹಾಸ್ಟೆಲ್‌ಗಳಲ್ಲಿ ಅಕ್ರಮವಾಗಿ ವಾಸವಾಗಿರುವವರನ್ನುಹೊರದಬ್ಬಿ, ಅರ್ಹ ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಡುವ ನಿಟ್ಟಿನಲ್ಲಿ ಡಿಜಿಟಲ್‌ ಆ್ಯಕ್ಷೆಸ್‌ ಕಾರ್ಡ್‌ಪರಿಚಯಿಸಲು ಚಿಂತನೆ ನಡೆಸುತ್ತಿದೆ. ಪ್ರತಿವಿದ್ಯಾರ್ಥಿಗೂ ದಾಖಲಾತಿ ಸಂದರ್ಭದಲ್ಲಿ ಐಡಿಕಾರ್ಡ್‌ ನೀಡಲಾಗುತ್ತದೆ. ಇದನ್ನು ಸ್ಮಾರ್ಟ್‌ ಕಾರ್ಡ್‌ರೂಪದಲ್ಲಿ ನೀಡಿ, ಅದನ್ನೇ ಆ್ಯಕ್ಷೆಸ್‌ ಕಾರ್ಡ್‌ ಆಗಿಬಳಸುವ ಮಾದರಿಯಲ್ಲಿ ಸಿದ್ಧಪಡಿಸಲು ಬೇಕಾದಚರ್ಚೆಗಳು ಆರಂಭವಾಗಿದೆ. ಹಾಗೆಯೇಬಯೊಮೆಟ್ರಿಕ್‌ ಯಂತ್ರದ ಅಳವಡಿಕೆಗೂ ಚಿಂತನೆನಡೆಸುತ್ತಿದ್ದೇವೆ.

ತಕ್ಷಣವೇ ಇದು ಸಾಧ್ಯವಾಗದೇಇದ್ದರೂ ಹಂತ ಹಂತವಾಗಿ ಇದರ ಅನುಷ್ಠಾನಕ್ಕೆವಿಶ್ವವಿದ್ಯಾಲಯ ಚಿಂತನೆ ನಡೆಸಲಿದ್ದೇವೆ ಎಂದುಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿನೀಡಿದರು.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next