Advertisement

ಮಾವಿನ ಹಣ್ಣಿಗೆ ಗುರಿ ಇಡುತ್ತಿದ್ದ ರಿಕ್ಷಾ ಚಾಲಕನ ಪುತ್ರಿ ಇಂದು ಜಗಮೆಚ್ಚುವ ಆರ್ಚರ್

03:34 PM Aug 12, 2021 | ಕೀರ್ತನ್ ಶೆಟ್ಟಿ ಬೋಳ |
ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ಅತ್ಯುತಮ ಬಿಲ್ಗಾರನೆಂದು ಹೆಸರಾದವರು. ದ್ವಾಪರಯುಗದಲ್ಲಿ ಅರ್ಜುನ  ಏಕಮಾದ್ವಿತೀಯ ಬಿಲ್ಗಾರನಾಗಿದ ಬಿಲ್ವಿದ್ಯೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಭಾರತದಲ್ಲಿ ಆಧುನಿಕ ಬಿಲ್ಗಾರಿಕೆಯಲ್ಲಿ ಸಾಧನೆ ಮಾಡಿದವರು ಕಡಿಮೆ. ಆದರೆ ರಾಂಚಿಯ ಹುಡುಗಿಯೊಬ್ಬಳು ಭಾರತದ ಬಿಲ್ಗಾರಿಕೆಯಲ್ಲಿ ನಿಖರ ಗುರಿ ಇಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ದೀಪಿಕಾ ಕುಮಾರಿ. ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.
Now pay only for what you want!
This is Premium Content
Click to unlock
Pay with

ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರ ಅತ್ಯುತಮ ಬಿಲ್ಗಾರನೆಂದು ಹೆಸರಾದವರು. ದ್ವಾಪರಯುಗದಲ್ಲಿ ಅರ್ಜುನ  ಏಕಮಾದ್ವಿತೀಯ ಬಿಲ್ಗಾರನಾಗಿದ ಬಿಲ್ವಿದ್ಯೆಯಲ್ಲಿ ಶ್ರೀಮಂತ ಪರಂಪರೆ ಹೊಂದಿರುವ ಭಾರತದಲ್ಲಿ ಆಧುನಿಕ ಬಿಲ್ಗಾರಿಕೆಯಲ್ಲಿ ಸಾಧನೆ ಮಾಡಿದವರು ಕಡಿಮೆ. ಆದರೆ ರಾಂಚಿಯ ಹುಡುಗಿಯೊಬ್ಬಳು ಭಾರತದ ಬಿಲ್ಗಾರಿಕೆಯಲ್ಲಿ ನಿಖರ ಗುರಿ ಇಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರೇ ದೀಪಿಕಾ ಕುಮಾರಿ.

Advertisement

ದೀಪಿಕಾ ಕುಮಾರಿ ಬಿಹಾರ ರಾಜ್ಯದ (ಈಗ ಜಾರ್ಖಂಡ್) ರಾಂಚಿ ಬಳಿಯ ರಚುಚತಿ ಗ್ರಾಮದವರು. ದೀಪಿಕಾ ಕುಮಾರಿ ಜನಿಸಿದ್ದು 1994ರ ಜೂನ್ 13ರಂದು. ದೀಪಿಕಾ ತಂದೆ ಶಿವ ನಾರಾಯಣ್ ಮೆಹತೋ ಓರ್ವ ಆಟೋ ರಿಕ್ಷಾ ಚಾಲಕ. ತಾಯಿ ಗೀತಾ ಮೆಹತೋ ರಾಂಚಿಯ ಆಸ್ಪತ್ರೆಯಲ್ಲಿ ನರ್ಸ್.

ಮಿಡಲ್ ಕ್ಲಾಸ್ ಕುಟುಂಬದ ದೀಪಿಕಾ ಬಾಲ್ಯದಲ್ಲಿ ಕೋಲಿನ ಬಾಣಗಳಿಂದ ಮಾವಿನಕಾಯಿಗೆ ಗುರಿ ಇಡುತ್ತಿದ್ದರು. ಹೀಗಾಗಿ    ಬಿಲ್ಗಾರಿಕೆಯ ಮೋಹ ಬಾಲ್ಯದಿಂದಲೇ ಆರಂಭವಾಗಿತ್ತು. ಮಗಳಿಗೆ ಆಧುನಿಕ ರೀತಿಯಲ್ಲಿ ತರಬೇತಿ ಕೆೊಡಿಸಲು ಬೇಕಾದಂತಹ ಹಣಕಾಸಿನ ಸ್ಥಿತಿ ದೀಪಿಕಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಬಿದಿರಿನಿಂದ ಮನೆಯಲ್ಲಿ ಮಾಡಿದ ಬಿಲ್ಲು ಮತ್ತು ಬಾಣಗಳ ಮೂಲಕ ದೀಪಿಕಾ ಕುಮಾರಿ ಅಭ್ಯಾಸ ನಡೆಸಿದ್ದರು. ಟಾಟಾ ಆರ್ಚರಿ ಅಕಾಡಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಸಂಬಂಧಿ ವಿದ್ಯಾ ಕುಮಾರಿ ಅವರು ದೀಪಿಕಾರನ್ನು ಗುರುತಿಸಿ, ಸೂಕ್ತ ಮಾರ್ಗದರ್ಶನ ನೀಡಿದರು.

2005ರಲ್ಲಿ ದೀಪಿಕಾ ಕುಮಾರಿ ಮೊದಲ ದೊಡ್ಡ ಹೆಜ್ಜೆ ಇಟ್ಟಿದ್ದರು. ಖರ್ಸಾವನ್ ನಲ್ಲಿನ ಅರ್ಜುನ್ ಆರ್ಚರಿ ಅಕಾಡಮೆಗೆ ಸೇರ್ಪಡೆಯಾದರು. ಇದು ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಮುಂಡಾ ಅವರು ಸ್ಥಾಪಿಸಿದ್ದ ಸಂಸ್ಥೆ. ಇದಾದ ಮರುವರ್ಷ ಅಂದರೆ 2003ರಲ್ಲಿ ದೀಪಿಕಾ ಜಮ್ಶೆಡ್ ಪುರದ ಟಾಟಾ ಆರ್ಚರಿ ಅಕಾಡಮೆಗೆ ಸೇರ್ಪಡೆಯಾಗುತ್ತಾರೆ. ಅಲ್ಲಿ ಅವರು ಸರಿಯಾದ ಆಧುನಿಕ ಸಲಕರಣೆಗಳೊಂದಿಗೆ ಅಭ್ಯಾಸ ಆರಂಭಿಸುತ್ತಾರೆ. ಇಲ್ಲಿ ದೀಪಿಕಾಗೆ 500 ರೂ ಭತ್ಯೆಯೂ ಸಿಗುತ್ತಿತ್ತು. ಸತತ ಅಭ್ಯಾಸ ನಡೆಸಿದ ದೀಪಿಕಾ ಮನೆಯ ಕಡೆಯೂ ಮುಖ ಮಾಡಿರಲಿಲ್ಲ. ಮೂರು ವರ್ಷಗಳ ಬಳಿಕ ಅಂದರೆ 2009ರಲ್ಲಿ ಕೆಡೆಟ್ ವಿಶ್ವ ಚಾಂಪಿಯನ್ ಶಿಪ್ ಗೆದ್ದ ಬಳಿಕವೇ ದೀಪಿಕಾ ಕುಮಾರಿ ಮನೆಗೆ ಹೋಗಿದ್ದು. ಅಂತಹ ಶ್ರದ್ಧೆ, ಕಠಿಣ ಪರಿಶ್ರಮ ದೀಪಿಕಾರದ್ದು.

Advertisement

2009ರಲ್ಲಿ ಅಮೆರಿಕಾದ ಉತಾಹ್ ನಲ್ಲಿ ನಡೆದ 11ನೇ ವಿಶ್ವ ಯುವ ಆರ್ಚರಿ ಸ್ಪರ್ಧೆಯಲ್ಲಿ ದೀಪಿಕಾ ಜಯ ಗಳಿಸುತ್ತಾರೆ. ಅದೇ ಕೂಟದ ತಂಡ ಸ್ಪರ್ಧೆಯಲ್ಲೂ ಚಿನ್ನದ ಪದಕ ಜಯಿಸಿದ್ದರು. 2010ರ ದೆಹಲಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ದೀಪಿಕಾ ಎರಡು ಚಿನ್ನದ ಪದಕಕ್ಕೆ ಗುರಿ ಇಡುತ್ತಾರೆ. 2012ರಲ್ಲಿ ದೀಪಿಕಾ ಮೊದಲ ಬಾರಿಗೆ ವಿಶ್ವಕಪ್ ಚಿನ್ನ ಗೆದ್ದುಕೊಂಡಿದ್ದರು. ಪ್ರಬಲ ಪ್ರತಿಸ್ಪರ್ಧಿಯಾಗಿದ್ದ ಲಿ ಸಂಗ್ ಜಿನ್ ರನ್ನು ದೀಪಿಕಾ ಫೈನಲ್ ನಲ್ಲಿ ಸೋಲಿಸಿದ್ದರು. ಇದರ ಬಳಿಕ ದೀಪಿಕಾ ವಿಶ್ವ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೆ ಏರಿದ್ದರು.

2016ರ ಶಾಂಘಾಯ್ ವಿಶ್ವಕಪ್ ನ ಮೊದಲ ಹಂತದಲ್ಲಿ ದೀಪಿಕಾ ಕುಮಾರಿ ಮಹಿಳೆಯರ ರಿಕರ್ವ್ ಸ್ಪರ್ಧೆಯಲ್ಲಿ ದೀಪಿಕಾ, ಕಿ ಬೊ ಬೇ ಅವರ ವಿಶ್ವದಾಖಲೆಯ (686/720) ಅಂಕವನ್ನು ಸರಿದೂಗಿಸಿದ್ದರು. 2016ರ ರಿಯೋ ಒಲಿಂಪಿಕ್ಸ್ ಗೆ ಭಾರತದ ತಂಡದಲ್ಲಿ ಅರ್ಹತೆ ಪಡೆದ ದೀಪಿಕಾ ಕ್ವಾರ್ಟರ್ ಫೈನಲ್ ಸೋಲನುಭವಿಸಿದ್ದರು. 2021ರ ಪ್ಯಾರಿಸ್ ವಿಶ್ವಕಪ್  ಮೂರನೇ ಹಂತದ ಕೂಟದಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. 2021ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಉತ್ತಮ ಆರಂಭ ಮಾಡಿದ್ದರೂ, ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.

ಅತನು ದಾಸ್ ಜೊತೆ ಪ್ರೇಮ ವಿವಾಹ: ಭಾರತ ಪುರುಷರ ವಿಭಾಗದ ಸ್ಟಾರ್ ಆರ್ಚರ್ ಅತನು ದಾಸ್ ಜೊತೆ ದೀಪಿಕಾ ಕುಮಾರಿ 2020ರಲ್ಲಿ ವಿವಾಹವಾಗಿದ್ದರು. 2008ರಲ್ಲೇ ಅತನು ದಾಸ್ ಮತ್ತು ದೀಪಿಕಾ ಪರಿಚಯವಾಗಿತ್ತು. ಜಮ್ಶೆಡ್ ಪುರದ ಟಾಟಾ ಅಕಾಡಮೆಯಲ್ಲಿ ಇವರಿಬ್ಬರೂ ಒಟ್ಟಿಗೆ ಅಭ್ಯಾಸ ನಡೆಸಿದ್ದರು.

ಪರಿಚಯವಿದ್ದರೂ ಇಬ್ಬರ ನಡುವೆ ಅನ್ಯೋನ್ಯತೆ ಇರಲಿಲ್ಲ. ಆತನಿಗೆ ಆರಂಭದಲ್ಲಿ ಹಿಂದಿ ಭಾಷೆ ಬರುತ್ತಿರಲಿಲ್ಲ. ಹೀಗಾಗಿ ನಾವು ಹೆಚ್ಚು ಮಾತನಾಡುತ್ತಿರಲಿಲ್ಲ ಎನ್ನುತ್ತಾರೆ ದೀಪಿಕಾ. ಸಂವಹನ ಅಂತರಗಳು, ದೊಡ್ಡ ಅಹಂಗಳು ಮತ್ತು ತಪ್ಪುಗ್ರಹಿಕೆಗಳಿಂದ ಅವರ ಒಡನಾಟ ತುಸು ಕಡಿಮೆಯೇ ಇತ್ತು. ಅಹಂ ಕಾರಣಗಳಿಂದ ಸಣ್ಣ ಸಣ್ಣ ವಿಚಾರಗಳಿಗೂ ಅವರು ಜಗಳವಾಡುತ್ತಿದ್ದರು.

2016ರಲ್ಲಿ ಒಟ್ಟಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದರೂ ಪ್ರೀತಿ ಹುಟ್ಟಿರಲಿಲ್ಲ. 2017ರಲ್ಲಿ ಅಂದರೆ ಪರಿಚಯವಾಗಿ ಬಹುತೇಕ ಒಂದು ದಶಕದ ಬಳಿಕ ಅತನು ಮತ್ತು ದೀಪಿಕಾ ನಡುವೆ ಪ್ರೇಮಾಂಕುರವಾಗಿತ್ತು. ಅದಕ್ಕೆ ಕಾರಣವಾಗಿದ್ದು ಮೆಕ್ಸಿಕೋ ವಿಶ್ವ ಚಾಂಪಿಯನ್ ಶಿಪ್ ಸೋಲು!

ಈ ಸೋಲಿನ ಅವಲೋಕನ ಮಾಡುತ್ತಾ ಅತನು ಮತ್ತು ದೀಪಿಕಾ ಒಟ್ಟಿಗೆ ಕಾಲ ಕಳೆದಿದ್ದರು. ನಾವು ಈ ಸಮಯದಲ್ಲಿ ತುಂಬಾ ಮಾತನಾಡಿದೆವು. ನಮ್ಮ ನಡುವಿನ ತಪ್ಪು ಕಲ್ಪನೆಗಳು ಆವಾಗಲೇ ದೂರವಾಗಿತ್ತು ಎನ್ನುತ್ತಾರೆ ಅತ. ಆದರೆ ಈ ವಿಚಾರವನ್ನು ಗುಟ್ಟಾಗಿರಿಸಿಕೊಂಡಿದ್ದ ಈ ಜೋಡಿ ತಮ್ಮ ತಂಡದವರಿಗೂ ವಿಚಾರ ತಿಳಿಸಿರಲಿಲ್ಲ. 2020ರ ಟೋಕಿಯೊ ಒಲಿಂಪಿಕ್ಸ್ ಬಳಿಕ ಈ ಜೋಡಿ ವಿವಾಹವಾಗುವ ಯೋಜನೆ ಹಾಕಿಕೊಂಡಿತ್ತು. ಆದರೆ ಕೋವಿಡ್ ಕಾರಣದಿಂದ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಿಕೆಯಾದಾಗ 2020ರ ಜೂನ್ 30ರಂದು ವಿವಾಹವಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.