Advertisement

ಬಿರುಗಾಳಿ-ಮಳೆ: 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ

12:12 PM May 21, 2018 | Team Udayavani |

ಕೂಡ್ಲಿಗಿ: ಬಿರುಗಾಳಿ ಸಹಿತ ಸುರಿದ ಮಳೆಗೆ ತಾಲೂಕಿನ ಗುಡೆಕೋಟೆ ಮತ್ತು ಕಾನಹೊಸಹಳ್ಳಿ ಹೋಬಳಿಯ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಸುಮಾರು 30ಕ್ಕೂ ಮನೆಗಳ ಮೇಲ್ಛಾವಣಿ ಜಖಂಗೊಂಡಿದ್ದು, ವಿದ್ಯುತ್‌ ಕಂಬಗಳು, ಮರಗಳು ಹಾಗೂ ವಿಳೇದ್ಯೆಲೆ ಬಳ್ಳಿಗಳು ಧರೆಗೆ ಉರುಳಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.

Advertisement

ಗುಡೆಕೋಟೆ ಹೋಬಳಿಯ ಚಿಕ್ಕಜೋಗಿಹಳ್ಳಿ ತಾಂಡಾದಲ್ಲಿ 20 ಮನೆಗಳು ಹಾಗೂ ಡಿ.ಎಂ. ಜಯಕುಮಾರ್‌ನಾಯ್ಕ ಎಂಬುವವರಿಗೆ ಸೇರಿದ ವೀಳ್ಯದೆಲೆ ತೋಟ, ಗುಂಡುಮುಣುಗು, ಕಾನಹೊಸಹಳ್ಳಿ, ಇಮಡಾಪುರ, ಬಿಷ್ಣಹಳ್ಳಿಯಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿಹೋಗಿವೆ. ಮನೆಯಲ್ಲಿರುವ ಸಾಮಗ್ರಿಗಳಿಗೂ ಹಾನಿಯಾಗಿವೆ.

ಬಿಷ್ಣಹಳ್ಳಿ, ಗುಂಡುಮುಣುಗು ಗ್ರಾಮಗಳಲ್ಲಿ ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿವೆ. ಅಲ್ಲದೆ ಕೆಲ ಗ್ರಾಮಗಳಲ್ಲಿ
ಮರಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದು ವಿದ್ಯುತ್‌ ಕಂಬಗಳು ಮರಿದು ಬಿದ್ದಿವೆ. ವಿದ್ಯುತ್‌ ವ್ಯತ್ಯಯದಿಂದ ಜನರು
ಪರದಾಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next