Advertisement

ಮಂಗಳೂರು: ಟೈಮಿಂಗ್ಸ್ ವಿಚಾರ; ಮತ್ತೊಂದು ಬಸ್ ಗೆ ಕಲ್ಲು

03:57 PM Nov 15, 2021 | Team Udayavani |

ಮಂಗಳೂರು: ಟೈಮಿಂಗ್ಸ್ ವಿಚಾರದಲ್ಲಿ ಖಾಸಗಿ ಬಸ್ ನಿರ್ವಾಹಕರ ನಡುವಿನ ಸಂಘರ್ಷ ಮುಂದುವರೆದಿದ್ದು ನಗರದ ಕೊಟ್ಟಾರ ಚೌಕಿ ಬಳಿ ಖಾಸಗಿ ಎಕ್ಸ್ ಪ್ರೆಸ್ ಬಸ್ ಗೆ ಕಲ್ಲು ಹೊಡೆದು ಹಾನಿಗೊಳಿಸಿದ ಘಟನೆ ಸೋಮವಾರ ಸಂಭವಿಸಿದೆ.

Advertisement

ಇಬ್ಬರು ಬೈಕ್ ನಲ್ಲಿ ಬಂದು ಉಡುಪಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಗೆ ಕಲ್ಲು ಎಸೆದಿದ್ದಾರೆ. ಬಸ್ ನ ಗಾಜಿಗೆ ಹಾನಿಯಾಗಿದೆ.

ಕಳೆದ ಶನಿವಾರ ಇದೇ ಪರಿಸರದಲ್ಲಿ ಇಂತಹುದೇ ಘಟನೆ ಸಂಭವಿಸಿತ್ತು. ಬೈಕ್ ನಲ್ಲಿ ಬಂದಿದ್ದ ಇಬ್ಬರು ಸಿಟಿ ಬಸ್ ಗೆ ಕಲ್ಲು ಎಸೆದು ಪರಾರಿಯಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next