Advertisement

Kasargod: ರೈಲಿಗೆ ಕಲ್ಲು ತೂರಾಟ: ಮೂವರ ಬಂಧನ

07:37 PM Aug 24, 2023 | Team Udayavani |

ಕಾಸರಗೋಡು: ರೈಲು ಗಾಡಿಗೆ ನಿರಂತರವಾಗಿ ಕಲ್ಲೆಸೆತ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಶಂಕಾಸ್ಪದ ರೀತಿಯಲ್ಲಿ ರೈಲು ಹಳಿಯಲ್ಲಿ ಕಂಡ ಮೂವರು ಅನ್ಯರಾಜ್ಯ ಕಾರ್ಮಿಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಪಡನ್ನಕ್ಕಾಡ್‌ ಕೃಷ್ಣ ಪಿಳ್ಳೆ ನಗರದಲ್ಲಿ ವಾಸಿಸುವ ಪಶ್ಚಿಮ ಬಂಗಾಲದ ನಿವಾಸಿಗಳಾದ ಗೌತಂ ರೋಯ್‌ (27), ರಾಹುಲ್‌ ರೋಯ್‌ (25) ಮತ್ತು ತಾಪ್ಪನ್‌ ಬರ್ಮನ್‌ (43)ಬಂಧಿತರು.

Advertisement

ಅಬಕಾರಿ ಕಚೇರಿಗಳಿಗೆ ವಿಜಿಲೆನ್ಸ್‌ ದಾಳಿ: ಅಕ್ರಮ ದಾಸ್ತಾನು ಪತ್ತೆ
ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ರಾಜ್ಯಕ್ಕೆ ಅಕ್ರಮ ಮದ್ಯದ ಹೊಳೆ ಹರಿದು ಬರುವುದನ್ನು ತಡೆಗಟ್ಟಲು ಅಬಕಾರಿ ಇಲಾಖೆ ಆರಂಭಿಸಿರುವ ಕಾರ್ಯಾಚರಣೆಗಳ ಬಗ್ಗೆ ಪರಿಶೀಲಿಸಲು ಕಾಸರಗೋಡು ವಿಜಿಲೆನ್ಸ್‌ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯ ಐದು ಅಬಕಾರಿ ಕಚೇರಿಗಳಿಗೆ ಮಿಂಚಿನ ದಾಳಿ ನಡೆಸಲಾಗಿದೆ.

ಈ ಸಂದರ್ಭ ಕೆಲವು ಕಚೇರಿಗಳಲ್ಲಿ ಅವ್ಯವಹಾರಗಳನ್ನುಪತ್ತೆಹಚ್ಚಲಾಗಿದೆ ಎಂದು ವಿಜಿಲೆನ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೆಲವು ಕಚೇರಿಗಳಲ್ಲಿ ಹಲವು ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದು ಕೂಡ ಪತ್ತೆಯಾಗಿದೆ ಎಂದು ವಿಜಿಲೆನ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next