Advertisement

ನಾಯಿಗೆ ಕಲ್ಲು: ಉಡುಪಿಯಲ್ಲಿ ಎರಡು ಕುಟುಂಬಗಳ ನಡುವೆ ತಾರಕಕ್ಕೇರಿದ ಜಗಳ

11:44 AM Dec 30, 2021 | Team Udayavani |

ಉಡುಪಿ: ನಾಯಿಗೆ ಕಲ್ಲು ಹೊಡೆದ ಘಟನೆಗೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟವಾಗಿದೆ. ಈ ಬಗ್ಗೆ 80 ಬಡಗಬೆಟ್ಟುವಿನ ವಿನು ಅವರು ನೀಡಿರುವ ದೂರಿನ ಪ್ರಕಾರ ಅವರು ನೇತಾಜಿನಗರದ ಮನೆಯ ಬಳಿ ನಿಂತಿದ್ದಾಗ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗಣೇಶ ಎನ್ನುವಾತ ವಿನು ಅವರ ಮನೆಯ ಬಳಿ ಇದ್ದ ನಾಯಿಗೆ ಕಲ್ಲು ಹೊಡೆದಿದ್ದ. ಇದನ್ನು ಪ್ರಶ್ನಿಸಿದಾಗ ಗಣೇಶನು ವಿನು ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಸಂದರ್ಭ ವಿಜಯ ಹಾಗೂ ಗಣೇಶ ಕತ್ತಿ ಮತ್ತು ಕಬ್ಬಿಣದ ರಾಡ್‌ನಿಂದ ವಿನು ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.

Advertisement

ಹೊಡೆದಾಟದಲ್ಲಿ ವಿನು ಅವರ ತಾಯಿ ಹಾಗೂ ತಂದೆಯೂ ಗಾಯಗೊಂಡಿದ್ದಾರೆ. ಪ್ರತಿದೂರು ಈ ಘಟನೆಗೆ ಸಂಬಂಧಿಸಿ ಆಶಾ ಅವರು ಕೂಡ ದೂರು ನೀಡಿದ್ದು, ಅವರ ಪತಿ ಗಣೇಶ ಅವರೊಂದಿಗೆ ಆರೋಪಿಗಳಾದ ವಿನು ಮತ್ತು ಮಂಜುನಾಥ ಜಗಳವಾಡುತ್ತಿದ್ದಾಗ ಆಶಾ ಅವರು ಬಿಡಿಸಲು ಹೋಗಿದ್ದು, ಈ ವೇಳೆ ಮಂಜುನಾಥ ಹಾಗೂ ವಿನು ಇಬ್ಬರೂ ಆಶಾ ಹಾಗೂ ಅವರ ಪತಿ ಗಣೇಶ ಅವರಿಗೆ ಕತ್ತಿ ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ.

ಹಲ್ಲೆಯಿಂದ ಆಶಾ ಮತ್ತು ಅವರ ಪತಿ ಗಣೇಶ ಅವರ ತಲೆಗೆ ಗಾಯವಾಗಿದೆ ಎಂದು ದೂರಲಾಗಿದೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next