Advertisement

ತಜ್ಞರಿಂದ ಕಲ್ಲು ಸಂಕ ಪರಿಶೀಲನೆ

07:29 PM Apr 02, 2021 | Team Udayavani |

ಸಿದ್ದಾಪುರ: ತಾಲೂಕಿನ ಕೊರ್ಲಕೈ ಗ್ರಾಪಂ ವ್ಯಾಪ್ತಿಯ ಮಲವಳ್ಳಿಸಮೀಪ ನೈಸರ್ಗಿಕವಾಗಿ ನಿರ್ಮಾಣಗೊಂಡಿರುವ ಅಪರೂಪದಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಅಲ್ಲಿನ ಭೂ ಗುಣದಅಧ್ಯಯನಕ್ಕೆ ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದಭೂಗರ್ಭ ಶಾಸ್ತ್ರಜ್ಞರಾದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಆಗಮಿಸಿದ್ದರು.

Advertisement

ಜಗತ್ತಿನಲ್ಲೇ ಎರಡನೆಯದು ಎನ್ನಲಾಗುವ ಪ್ರಕೃತಿ ನಿರ್ಮಿತ ಕಲ್ಲು ಸಂಕದ ಸಂರಕ್ಷಣೆ ಕುರಿತಂತೆ ಗ್ರಾಮಸ್ಥರು ಸರಕಾರಕ್ಕೆಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಪೀಕರ್‌ ವಿಶ್ವೇಶ್ವರಹೆಗಡೆ ಕಾಗೇರಿಯವರು ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪನವರ ಗಮನಕ್ಕೆ ತಂದು ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದಮೂಲಕ 20 ಲಕ್ಷ ರೂ.ಗಳ ಅನುದಾನ ಮಂಜೂರಿ ಮಾಡಿಸಿದ್ದರು.

ಶಿಥಿಲಗೊಳ್ಳುತ್ತಿರುವ ಕಲ್ಲುಸಂಕದ ಸಂರಕ್ಷಣೆ ಕಾಮಗಾರಿ ನಡೆಸುವ ಮುನ್ನ ಅದಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಕಾರಣಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭಶಾಸ್ತ್ರಜ್ಞರನ್ನು ಇಲ್ಲಿನ ಭೂ ಗುಣದ ಪರೀಕ್ಷೆಗೆ ಕರೆತಂದಿದ್ದರು.ಕಲ್ಲು ಸಂಕದ ಮೇಲ್ಭಾಗ ಹಾಗೂ ಕೆಳಗಿನ ಹಳ್ಳದಲ್ಲಿನಮಣ್ಣು, ಕಲ್ಲುಗಳ ಪರೀಕ್ಷೆ, ಹಳ್ಳದಲ್ಲಿ ನೀರು ಹರಿಯುವಿಕೆಗಳಬಗ್ಗೆ ಪರೀಕ್ಷೆ ನಡೆಸಿದ ಡಾ| ಇಬ್ರಾಹಿಂ ಹಾಗೂ ಡಾ| ಸಲೀಂ ಕಲ್ಲು ಸಂಕ ಲ್ಯಾಟ್ರೇಟ್‌ (ಜಂಬಿಟ್ಟಿಗೆ) ನಿಂದ ಪರಿವರ್ತಿತವಾದ ಅಗ್ನಿಶಿಲೆ ಕಲ್ಲುಗಳಿಂದ ರಚನೆಯಾಗಿದ್ದು ತಳ ಭಾಗದಲ್ಲಿಹರಿಯುವ ಹಳ್ಳದ ನೀರಿನ ಹರಿಯುವಿಕೆ ಕಾರಣದಿಂದ ಕೊರೆದಿದೆ. ಮಿಲಿಯಗಟ್ಟಲೆ ವರ್ಷಗಳ ಹಿಂದಿನ ಪ್ರಕ್ರಿಯೆ ಇದಾಗಿದ್ದು ನೀರಿನೊಳಗಿನ ಶಿಲೆಗಳು ಹಗುರವಾಗಿದ್ದು ಮೇಲ್ಭಾಗದ ಶಿಲೆಗಳು ಭಾರವಾಗಿವೆ. ವಾತಾವರಣದಬದಲಾವಣೆ ಕಾರಣದಿಂದ ಶಿಲೆಗಳು ಶಿಥಿಲಗೊಳ್ಳುತ್ತಿವೆ.ಕಲ್ಲುಸಂಕದ ಸುತ್ತಲಿನ ಭಾಗದ ನೆಲದಲ್ಲಿ ಈ ಶಿಲಾರಚನೆ ಇದೆ.ಇಲ್ಲಿ ಕಾಮಗಾರಿ ಮಾಡುವುದು ಸೂಕ್ಷ್ಮ ಮತ್ತು ಸವಾಲಿನ ಕೆಲಸವಾಗಿದೆ. ನಾವು ಯೋಜನಾ ವರದಿ ನೀಡುವ ಮುನ್ನಇನ್ನೊಮ್ಮೆ ಪರಿಶೀಲನೆ ನಡೆಸುತ್ತೇವೆ ಎಂದು ವಿವರಿಸಿದರು.

ಮಳೆಗಾಲದ ರಭಸದ ನೀರಿನ ಹರಿವಿನ ಕಾರಣ ಕಲ್ಲುಸಂಕದ ತಳಭಾಗದ ಕಲ್ಲುಗಳು ಕುಸಿದಿವೆ. ಹಾಗಾಗಿ ಹಳ್ಳದ ನೀರಿನ ಹರಿಯುವಿಕೆಯನ್ನು ಕಲ್ಲುಸಂಕದ ಮತ್ತೂಂದುತಳಭಾಗದಲ್ಲಿ ಹರಿಯುವಂತೆ ಮಾಡಬೇಕು. ಯಾವುದೇಕಾರಣಕ್ಕೂ ಸಿಮೆಂಟ್‌ ಮುಂತಾದ ಆಧುನಿಕ ಪರಿಕರಗಳಬಳಕೆ ಬೇಡ. ಹಳ್ಳದ ಅಂಚಿನಲ್ಲಿ ಪಿಚಿಂಗ್‌ ನಿರ್ಮಾಣ ಮತ್ತುಗಿಡಗಂಟಿಗಳನ್ನ ತೆರವು ಮಾಡಬೇಕು ಎಂದು ಗ್ರಾಮಸ್ಥರಾದ ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಆಗ್ರಹಿಸಿದರು.

ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಜಿ.ಸಿ. ಭೂ ಗರ್ಭ ಶಾಸ್ತ್ರಜ್ಞರ ವರದಿ ಹಾಗೂ ಗ್ರಾಮಸ್ಥರ ಅಭಿಪ್ರಾಯಪಡೆದು ಕಲ್ಲು ಸಂಕಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದರು.

Advertisement

ಪ್ರಾಧಿಕಾರದ ಸಹಾಯಕ ನಿರ್ದೇಶಕ ಶೇಜೇಶ್ವರ, ಕಾರವಾರನಿರ್ಮಿತಿ ಕೇಂದ್ರದ ಸಂಯೋಜನಾ ಆಯುಕ್ತ ಕುಮಾರ ಶೆಟ್ಟಿ,ಗ್ರಾಪಂ ಸದಸ್ಯ ಶ್ರೀನಿವಾಸ, ಗ್ರಾಮಸ್ಥರಾದ ನಾರಾಯಣ್‌,ಲಕ್ಷ್ಮಿನಾರಾಯಣ ಕಲಗಾರು, ಗುರುಮೂರ್ತಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next